ಬಸವರಾಜ.ಟಿ.ಎಂ ಕನ್ನಡ ಭಾಷಾ ಶಿಕ್ಷಕರು,ನಾನು ಮೂಲತಹ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕುರುಬನಹಳ್ಳಿಯವನು. ಪದವಿಯವರೆಗೆ ನಮ್ಮ ತಾಲ್ಲೂಕಿನಲ್ಲಿ ಓದಿದೆ. ನಂತರ ಎಂ.ಎ,ಬಿಇಡಿ ಪದವಿಗಳನ್ನು ಮೈಸೂರಿನಲ್ಲಿ ಮುಗಿಸಿದೆ. 2007 ರಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಆರಂಭ,ನಂತರ ಆ ಇಲಾಖೆಗೆ ರಾಜಿನಾಮೆ ನೀಡಿ ಶಿಕ್ಷಣ ಇಲಾಖೆಗೆ ಸೇರಿಕೊಂಡೆ. 2008 ರಿಂದ 2015 ರವರೆಗೆ ಸರ್ಕಾರಿ ಪ್ರೌಢಶಾಲೆ,ಬೆಣಗಾಲು ಪಿರಿಯಾಪಟ್ಟಣ ತಾಲ್ಲೂಕು ಮೈಸೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದೆ. 2015 ರಲ್ಲಿ ವರ್ಗಾವಣೆಯಾಗಿ ಸರ್ಕಾರಿ ಪ್ರೌಢಶಾಲೆ,ರೂಪನಗುಡಿ,ಬಳ್ಳಾರಿ ಪೂರ್ವ ವಲಯ ಬಳ್ಳಾರಿ ಜಿಲ್ಲೆಯಲ್ಲಿ 2021 ರ ವರೆಗೆ ಸೇವೆ ಸಲ್ಲಿಸಿದೆನು. 2021 ರಲ್ಲಿ ವರ್ಗಾವಣೆಯಾಗಿ ಪ್ರಸ್ತುತ ವಿಜಯನಗರ ಜಿಲ್ಲೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.