ದಾಸ ಸಾಹಿತ್ಯ – ಕೀರ್ತನೆ, ಸುಳಾದಿ, ಊಗಭೋಗ, ದಂಡಕ,ವೃತ್ತನಾಮ,ಮುಂಡಿಗೆ, ವ್ಯಾಸಕೂಟ ,ದಾಸಕೂಟ
ಕೀರ್ತನೆ :- ಕೀರ್ತನೆ ಎಂದರೆ ಹೊಗಳಿಕೆ ಸುತಿ, ದೇವರನ್ನು ಸ್ತುತಿಸಲು ಕಂಡುಕೊಂಡ ಸುಲಭ ಮಾರ್ಗವೇ ಕೀರ್ತನ ಪ್ರಕಾರ, ಕೀರ್ತನೆಯು ಪಲ್ಲವಿ ಅನುಪಲ್ಲವಿ ಮತ್ತು ಚರಣ ಅಥವಾ ನುಡಿಗಳಿಂದ ಕೂಡಿರುತ್ತವೆ. ಕೀರ್ತನೆಗಳು ರಾಗಯುಕ್ತ ಮತ್ತು ತಾಳಬದ ವಾದ ರಚನೆಗಳು. ಪಲ್ಲವಿಯಲ್ಲಿ ದಾಸರು ದರ್ಶನ ವನ್ನೂ ಅಥವಾ ಅವರು ಪ್ರತಿಪಾದಿಸಿದ ತತ್ವವನ್ನೋ ಹೇಳಿ, ಅನುಪಲ್ಲವಿಯಲ್ಲಿ ಅದನ್ನು ಪುಷ್ಟಿಕರಿಸುವರು. ನುಡಿ ಅಥವಾ ಚರಣಗಳಲ್ಲಿ ಅವರ ತತ್ವಗಳನ್ನು ಸಮರ್ಥಿಸಲು ಸಾದೃಶ್ಯಗಳನ್ನು (ಉದಾ) ನೀಡಿರುತ್ತಾರೆ. ಎಲ್ಲಾ ಕೀರ್ತನೆಗಳಲ್ಲಿ ಅನುಪಲ್ಲವಿ ಕಂಡು ಬರುವುದಿಲ್ಲ. ಪ್ರತಿ ಕೀರ್ತನೆಯಲ್ಲಿ ಕನಿಷ್ಠ ಮೂರು ನುಡಿಗಳು ಕಂಡು ಬರುತ್ತದೆ. ಪ್ರತಿ ಕೀರ್ತನೆಯ ಕೊನೆಯಲ್ಲಿ ದಾಸರ ಆರಾಧ್ಯ ದೇವರ ಅಂಕಿತನಾಮ ಇರುತ್ತದೆ ಇದನ್ನೇ ಅಂಕಿತ ಎನ್ನುವರು. ಅಂದರೆ ತಮ್ಮ ಎಲ್ಲಾ ಕೀರ್ತನೆಗಳನ್ನು ಇಷ್ಟ ದೇವರಿಗೆ ಅರ್ಪಿಸಿರುವುದನ್ನು ಕಾಣಬಹುದು. ದ್ವಿತೀಯ ಪ್ರಾಸ ನಿಯತವಾಗಿರುತ್ತದೆ. ಪೌರಾಣಿಕ ಪಾತ್ರಗಳು, ಶ್ರೀ ವಿಷ್ಣು ಅವತಾರಗಳು ಆವರ ಮಹಿಮೆ, ಘಟನೆ, ಜೀವನಾನುಭವ, ಸಮಾಜದಲ್ಲಿನ ಓರೆ ಕೋರೆಗಳು ಇತ್ಯಾದಿ ವಸ್ತು ವಿಶೇಷಗಳೇ ಕೀರ್ತನೆಗಳಲ್ಲಿ ಹರಿದಾಡಿವೆ, ಸುಳಾದಿಗಳಿಗಿಂತ ಸರಳ, ಉಗಾಭೋಗಗಳಿಗಿಂತ ಬಿಗಿಯಾದ ಬಂಧ ಉಳ್ಳದ್ದು ಕೀರ್ತನೆ, ಪುರಂದರದಾಸರ ಒಂದು ಕೀರ್ತನೆಯನ್ನು ಉದಾಹರಣೆಗಾಗಿ ಇಲ್ಲಿ ನೀಡಿದೆ.
ಜಾಲಿಯ ಮರದಂತೆ ಧರೆಯೊಳು ದುರ್ಜನರು |
ಮೂಲಾಗ್ರಪರಿಯಂತೆ ಮುಳು ಕೂರಿಸಂತೆ ಅ.ಪ||
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ
ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತಮ್ಮ ಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ
ತನ್ನಿಂದ ಉಪಕಾರ ತಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರದ ಕುನ್ನಿ ಮಾನವರಂತೆ
ಇವರ ಕಾಠ್ಯವು ಪುರಂದರ ವಿಠಲ ||3||
ಸುಳಾದಿ :- ಸುಳಾದಿಗಳು ಹರಿದಾಸ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ, ತಾಳ ಪ್ರಧಾನವಾದ ಗೇಯ ರಚನೆ, ಸಂಗೀತ ಶಾಸ್ತದ ಸಾಲಗಸೂಡವೇ ಸುಳಾದಿಗಳ ಮೂಲವೆನ್ನುವರು. ಸಾಲಗಸೂಡವನ್ನು ನಿರ್ದಿಷ್ಟವಾದ ಏಳು ತಾಳಗಳಲ್ಲಿ ಮಾತ್ರ ಹಾಡಬೇಕೆನ್ನುವ ನಿರ್ಬಂಧವಿತ್ತು. ಈ ಏಳು ತಾಳಗಳಿಗೆ ಸುಳಾದಿ
ತಾಳಗಳೆಂದೇ ಹೆಸರಿತ್ತು. ಆ ತಾಳಗಳೆಂದರೆ 1) ಧ್ರುವ 2) ಮಠ 3) ತ್ರಿಪುಟ 4) ಝಂಪೆ 5) ರೂಪಕ 6) ಅಟ್ಟ 7) ಏಕತಾಳ, ಒಂದೊಂದು ತಾಳದಲ್ಲಿ ಒಂದೊಂದು ನುಡಿಯಿರುತ್ತದೆ. ಏಳು ನುಡಿಗಳ ಕೊನೆಯಲ್ಲಿ ಸುಳಾದಿಯ ಸಾರವೆಲ್ಲ ಅಡಕವಾಗಿರುವ ಎರಡು ಸಾಲುಗಳ ಒಂದು ಜತೆ ಬರುತ್ತವೆ. ಕೆಲವೊಮ್ಮೆ ಐದು ತಾಳಗಳಲ್ಲಿ ಬರುವುದುಂಟು. ಸುಳಾದಿಗಳನ್ನು ಇಂತಹುದೇ ರಾಗದಲ್ಲಿ ಹಾಡ ಬೇಕೆಂಬ ಕಟ್ಟುಪಾಡಿಲ್ಲದ ತತ್ವ ಪ್ರಧಾನ ರಚನೆಗಳಿವು. ವೇದ ಉಪನಿಷತ್ತುಗಳ ಸಾರ ಸುಳಾದಿಗಳಲ್ಲಿ ಸುಳಿದಾಡಿದೆ ಎಂದರೆ ತಪ್ಪಾಗಲಾರದು.
ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಅತ್ಯಂತ ಆಪ್ಯಾಯಮಾನವಾಗಿ ಕಣ್ಣಿಗೆ ಕಟ್ಟುವ ದೃಶ್ಯಗಳಂತೆ ವರ್ಣಿಸಿರುವ ಪುರಂದರ ದಾಸರ ಈ ಸುಳಾದಿಯನ್ನು ಗಮನಿಸಿ, ಸುಳಾದಿಗಳು ವಾದ ನರ್ತನಗಳಿಗೆ ಉಪಯುಕ್ತವಾದದು. ವಿಜಯದಾಸರನ್ನು ಸುಳಾದಿಯ ದಾಸರೆಂದು ಕರೆಯುವರು. ಸುಳಾದಿಯು ಒಟಾರೆಯಾಗಿ ದಾಸ ಸಾಹಿತ್ಯದ ಒಂದು ಪ್ರಕಾರವಾಗಿ ಬೆಳೆದು ಬಂದಿದೆ.
ಉದಾ:
ಧ್ರುವತಾಳ
ಎಲೆ ಎಲೆ ಸಿಡಿಲೆ, ಮಿಂಚೆ ಗರ್ಜಿಸದಿರಿ ನೀವು
ಎಲೆ ಎಲೆ ಮೇಘರಾಜಾ, ಮಳೆಗರೆಯದಿರು
ಎಲೆ ಎಲೆ ಭೂದೇವಿ, ನವರತುನಗಳಿಂದ
ನೆಲೆಕಟ್ಟ ಕಟ್ಟಿಕೊಂಡು ಥಳಥಳಸುತಲಿರು
ಹುಲಿಯುಗುರು ಅರಳೆಲೆ ಮಾಗಾಯಿ ಕಂಕಣ |
ಘಲುಘಲು ಘಲುರೆಂಬ ಕಾಲಪೆಂಡೆಯನಿಟ್ಟು
ಬಲರಾಮ ಪುರಂದರವಿಠಲ ಗೋಪಾಲಕೃಷ್ಣ
ನಲಿಯುತ ಅಂಬೆಗಾಲನಿಕ್ಕುತ ಬರುತಾರೆ.
ಉಗಾಭೋಗ :- ಎಲ್ಲಾ ರಾಗ, ತಾಳಗಳಲ್ಲಿ ಹಾಡಬಹುದಾದ ದಾಸ ಸಾಹಿತ್ಯದ ಒಂದು ಬಗೆಯ ಹಾಡು, ದಾಸ ಸಾಹಿತ್ಯದ ವಿಶಿಷ್ಟ ಗೇಯ ಪ್ರಕಾರ, ಉಗಾಭೋಗದ ಉಗಮ ಕ್ರಿ.ಶ.ಸುಮಾರು 13ನೇ ಶತಮಾನದ ಶಾರ್ಙ್ಗದೇವನ ಕಾಲದಲ್ಲಿ ಕಂಡು ಬಂದಿದೆ. ಸಂಗೀತದ ಪಂಚಧಾತುಗಳು 1) ಉದ್ಧಾಹ, 2) ಮೇಲಾಪಕ, 3) ದ್ರುವ, 4) ಅಂತರಾ 5) ಅಭೋಗಗಳು ಇವುಗಳಿಂದ 'ಉದ್ಧಾಹಾ ಭೋಗವೇ' ಕನ್ನಡದಲ್ಲಿ ಉಗಾಭೋಗವಾಗಿರುವ ಸಾಧ್ಯತೆಯಿದೆ. ರಾಗ ತಾಳಗಳ ಕಟ್ಟಿನಿಂದ ಮುಕ್ತವಾಗಿರುವುದೇ ಮುಖ್ಯ ಲಕ್ಷಣ. ಉಗಾಭೋಗಗಳು ಚಿಕ್ಕ ಚಿಕ್ಕ ರಚನೆಗಳಾಗಿದ್ದು ಶರಣರ ವಚನದಂತೆ, ಸಂಸ್ಕೃತದ ಶ್ಲೋಕದಂತೆ ಕಾಣುತ್ತದೆ. ಒಂದೇ ರಾಗದಲ್ಲಿ ಸುಶ್ರಾವ್ಯವಾಗಿ ಹಾಡಬಹುದು.
ಸಾಮಾನ್ಯವಾಗಿ ದ್ವಿತೀಯ ಪ್ರಾಸವಿರುತ್ತದೆ. ಕೆಲವೊಮ್ಮೆ ಅಂತಪಾಸವಿರುವುದೂ ಉಂಟು. ಕೊನೆಯಲ್ಲಿ ದಾಸರ ಅಂಕಿತವಿರುತ್ತದೆ. ಕೀರ್ತನೆಗಳಲ್ಲಿರುವ ವಸ್ತು ವಿಶೇಷಗಳಾದ ಹರಿನಾಮ ಸ್ಮರಣೆ ಮತ್ತು ಮಹಿಮ, ಹರಿಭಕ್ತಿ ಅನುಭವಗಳು ಇವೆ. ಅನುಭವ ಹೆಚ್ಚಾದಂತೆ ಮಾತು ಮಿತವಾಗುತ್ತದೆಂಬ ತತ್ವವನ್ನು ದತ್ತು ತಮ್ಮ ಉಗಾಭೋಗಗಳ ಮೂಲಕ ಸತ್ಯವಾಗಿಸಿದ್ದಾರೆ. ಹರಿದಾಸರು ಉನ್ನತ ಆಧ್ಯಾತ್ಮಿಕ ತತ್ವದರ್ಶನ ನೀಡಿದ ಹಿರಿಯ ಅನುಭಾವಿಗಳೆಂದು ಇಂತಹ ರಚನೆಗಳಿಂದ ತಿಳಿಯ ಬಹುದಾಗಿದೆ.!
ದಂಡಕ :- ಗದ್ಯ - ಪದ್ಯಗಳ ಮೇಳ, ಹರಿದಾಸ ಸಾಹಿತ್ಯದಲ್ಲಿ ದೊರೆತಿರುವ ಏಕೈಕ ದಂಡಕ ಶ್ರೀಪಾದರಾಜರ ಶ್ರೀ ಲಕ್ಷ್ಮೀನರಸಿಂಹ ಪ್ರಾದುರ್ಭಾವ ದಂಡಕ.
ವೃತ್ತನಾಮ :- ವೃತ್ತನಾಮ ಮತ್ತು ದಂಡಕಗಳು ದಾಸ ಸಾಹಿತ್ಯದಲ್ಲಿ ಅಪರೂಪವಾಗಿ ಕಂಡು ಬರುವ ಸಾಹಿತ್ಯ ಪ್ರಕಾರಗಳು. ವೃತ್ತನಾಮದಲ್ಲಿ ಒಂದುಪದ, ಒಂದುಶ್ಲೋಕ, ಒಂದುಪದ, ಒಂದುಶೋಕ ಈ ಪ್ರಕಾರದಲ್ಲಿ ಮುಂದುವರಿಯುತ್ತದೆ.
ಮುಂಡಿಗೆ :- ಪೌರಾಣಿಕ, ಆಧ್ಯಾತ್ಮಿಕ ಅಂಶಗಳಿಂದ ಕೂಡಿರುವ ಚಮತ್ಕಾರದ ನುಡಿಗಳು. ಇವುಗಳು ಒಗಟಿನ ರೂಪದಲ್ಲಿ ರಚಿತವಾಗಿರುತ್ತವೆ. ಕೀರ್ತನೆ ಉಗಾಭೋಗಗಳಂತೆ ಪ್ರಾಸವಿದ್ದು ರಾಗ ತಾಳಗಳ ನಿರ್ಬಂಧವಿಲ್ಲದ ಹಾಡುಗಳಾಗಿರುತ್ತವೆ. ಬೆಡಗಿನ ವಚನಗಳಿಗೆ ಸಂವಾದಿ ಎನ್ನಬಹುದು.
ವ್ಯಾಸಕೂಟ : ಸಂಸ್ಕೃತ ಭಾಷೆಯಲ್ಲಿ ತತ್ವ ಪ್ರಸಾರ ಮಾಡಿದ, ಶಾಸ್ತ್ರವೇತ್ತರನ್ನು ವ್ಯಾಸಕೂಟದವರೆಂದು ಕರೆಯುವರು.
ದಾಸಕೂಟ : ವ್ಯಾಸರಾಯರು ತಮ್ಮ ಶಿಷ್ಯವೃಂದಕ್ಕೆ ದಾಸ ದೀಕೆಯಿತ್ತು ಹರಿದಾಸರೆಂದರೆ ಹೇಗಿರಬೇಕು, ಅವರ ದಿನಚರಿ, ಮನೋಭಾವ, ಕಾರವೈಖರಿ, ವೇಷಭೂಷಣ ಹೀಗೆ ಎಲ್ಲವನ್ನು ರೂಪಿಸಿದೆ. ಜಾತಿ – ಮತಗಳ ಕಟ್ಟುಪಾಡುಗಳು ಇಲ್ಲದ ಹರಿದಾಸರ ಪರಂಪರೆಯನ್ನು ದಾಸಕೂಟವೆಂದು ಕರೆಯುತ್ತಾರೆ. ಬ್ರಾಹ್ಮಣರಲ್ಲದ ಹರಿದಾಸರು ಅಲ್ಲಿದ್ದರು. ಜಾನಪದ ನೆಲೆಯಿಂದ ಬಂದ 'ದಾಸ'ರ ವೇಷವನ್ನು ಹರಿದಾಸರಿಗೂ ಕೊಡಿಸಿ ತಾಳ, ತಂಬೂರಿಗಳನ್ನು ಓಡಿಸಿ ಕಾಲಿಗೆ ಗೆಜ್ಜೆ ಕಟ್ಟಿ ಕೈಯಲ್ಲಿ ಚಿಟಿಕೆ ನುಡಿಸುತ್ತಾ ಹರಿನಾಮವನ್ನು ಹಾಡುತ್ತಾ ಮನೆಮನೆಯ ಬಾಗಿಲಿಗೆ ಹರಿಭಕ್ತಿಯನ್ನು ಕೊಂಡೊಯ್ದರೆ ಹರಿದಾಸರು, ದಾಸಕೂಟದ ಮಹನೀಯರು. ಕನಕ ಪುರಂದರರು ಈ ಪರಂಪರೆಯ ಅಶ್ವಿನಿದೇವತೆಗಳು. ಇವರಿಬ್ಬರಿಗೂ ವ್ಯಾಸರಾಯರೇ ಗುರುಗಳು. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು ಈ ಮೂವ್ವರು ವ್ಯಾಸಕೂಟವನ್ನು ಮತ್ತು ದಾಸಕೂಟವನ್ನು ಸಮರ್ಥವಾಗಿ ಮುನ್ನಡೆಸಿದರು.
ಜಾಲಿಯ ಮರದಂತೆ ಧರೆಯೊಳು ದುರ್ಜನರು |
ಮೂಲಾಗ್ರಪರಿಯಂತೆ ಮುಳು ಕೂರಿಸಂತೆ ಅ.ಪ||
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ
ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತಮ್ಮ ಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ
ತನ್ನಿಂದ ಉಪಕಾರ ತಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರದ ಕುನ್ನಿ ಮಾನವರಂತೆ
ಇವರ ಕಾಠ್ಯವು ಪುರಂದರ ವಿಠಲ ||3||
ಸುಳಾದಿ :- ಸುಳಾದಿಗಳು ಹರಿದಾಸ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ, ತಾಳ ಪ್ರಧಾನವಾದ ಗೇಯ ರಚನೆ, ಸಂಗೀತ ಶಾಸ್ತದ ಸಾಲಗಸೂಡವೇ ಸುಳಾದಿಗಳ ಮೂಲವೆನ್ನುವರು. ಸಾಲಗಸೂಡವನ್ನು ನಿರ್ದಿಷ್ಟವಾದ ಏಳು ತಾಳಗಳಲ್ಲಿ ಮಾತ್ರ ಹಾಡಬೇಕೆನ್ನುವ ನಿರ್ಬಂಧವಿತ್ತು. ಈ ಏಳು ತಾಳಗಳಿಗೆ ಸುಳಾದಿ
ತಾಳಗಳೆಂದೇ ಹೆಸರಿತ್ತು. ಆ ತಾಳಗಳೆಂದರೆ 1) ಧ್ರುವ 2) ಮಠ 3) ತ್ರಿಪುಟ 4) ಝಂಪೆ 5) ರೂಪಕ 6) ಅಟ್ಟ 7) ಏಕತಾಳ, ಒಂದೊಂದು ತಾಳದಲ್ಲಿ ಒಂದೊಂದು ನುಡಿಯಿರುತ್ತದೆ. ಏಳು ನುಡಿಗಳ ಕೊನೆಯಲ್ಲಿ ಸುಳಾದಿಯ ಸಾರವೆಲ್ಲ ಅಡಕವಾಗಿರುವ ಎರಡು ಸಾಲುಗಳ ಒಂದು ಜತೆ ಬರುತ್ತವೆ. ಕೆಲವೊಮ್ಮೆ ಐದು ತಾಳಗಳಲ್ಲಿ ಬರುವುದುಂಟು. ಸುಳಾದಿಗಳನ್ನು ಇಂತಹುದೇ ರಾಗದಲ್ಲಿ ಹಾಡ ಬೇಕೆಂಬ ಕಟ್ಟುಪಾಡಿಲ್ಲದ ತತ್ವ ಪ್ರಧಾನ ರಚನೆಗಳಿವು. ವೇದ ಉಪನಿಷತ್ತುಗಳ ಸಾರ ಸುಳಾದಿಗಳಲ್ಲಿ ಸುಳಿದಾಡಿದೆ ಎಂದರೆ ತಪ್ಪಾಗಲಾರದು.
ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಅತ್ಯಂತ ಆಪ್ಯಾಯಮಾನವಾಗಿ ಕಣ್ಣಿಗೆ ಕಟ್ಟುವ ದೃಶ್ಯಗಳಂತೆ ವರ್ಣಿಸಿರುವ ಪುರಂದರ ದಾಸರ ಈ ಸುಳಾದಿಯನ್ನು ಗಮನಿಸಿ, ಸುಳಾದಿಗಳು ವಾದ ನರ್ತನಗಳಿಗೆ ಉಪಯುಕ್ತವಾದದು. ವಿಜಯದಾಸರನ್ನು ಸುಳಾದಿಯ ದಾಸರೆಂದು ಕರೆಯುವರು. ಸುಳಾದಿಯು ಒಟಾರೆಯಾಗಿ ದಾಸ ಸಾಹಿತ್ಯದ ಒಂದು ಪ್ರಕಾರವಾಗಿ ಬೆಳೆದು ಬಂದಿದೆ.
ಉದಾ:
ಧ್ರುವತಾಳ
ಎಲೆ ಎಲೆ ಸಿಡಿಲೆ, ಮಿಂಚೆ ಗರ್ಜಿಸದಿರಿ ನೀವು
ಎಲೆ ಎಲೆ ಮೇಘರಾಜಾ, ಮಳೆಗರೆಯದಿರು
ಎಲೆ ಎಲೆ ಭೂದೇವಿ, ನವರತುನಗಳಿಂದ
ನೆಲೆಕಟ್ಟ ಕಟ್ಟಿಕೊಂಡು ಥಳಥಳಸುತಲಿರು
ಹುಲಿಯುಗುರು ಅರಳೆಲೆ ಮಾಗಾಯಿ ಕಂಕಣ |
ಘಲುಘಲು ಘಲುರೆಂಬ ಕಾಲಪೆಂಡೆಯನಿಟ್ಟು
ಬಲರಾಮ ಪುರಂದರವಿಠಲ ಗೋಪಾಲಕೃಷ್ಣ
ನಲಿಯುತ ಅಂಬೆಗಾಲನಿಕ್ಕುತ ಬರುತಾರೆ.
ಉಗಾಭೋಗ :- ಎಲ್ಲಾ ರಾಗ, ತಾಳಗಳಲ್ಲಿ ಹಾಡಬಹುದಾದ ದಾಸ ಸಾಹಿತ್ಯದ ಒಂದು ಬಗೆಯ ಹಾಡು, ದಾಸ ಸಾಹಿತ್ಯದ ವಿಶಿಷ್ಟ ಗೇಯ ಪ್ರಕಾರ, ಉಗಾಭೋಗದ ಉಗಮ ಕ್ರಿ.ಶ.ಸುಮಾರು 13ನೇ ಶತಮಾನದ ಶಾರ್ಙ್ಗದೇವನ ಕಾಲದಲ್ಲಿ ಕಂಡು ಬಂದಿದೆ. ಸಂಗೀತದ ಪಂಚಧಾತುಗಳು 1) ಉದ್ಧಾಹ, 2) ಮೇಲಾಪಕ, 3) ದ್ರುವ, 4) ಅಂತರಾ 5) ಅಭೋಗಗಳು ಇವುಗಳಿಂದ 'ಉದ್ಧಾಹಾ ಭೋಗವೇ' ಕನ್ನಡದಲ್ಲಿ ಉಗಾಭೋಗವಾಗಿರುವ ಸಾಧ್ಯತೆಯಿದೆ. ರಾಗ ತಾಳಗಳ ಕಟ್ಟಿನಿಂದ ಮುಕ್ತವಾಗಿರುವುದೇ ಮುಖ್ಯ ಲಕ್ಷಣ. ಉಗಾಭೋಗಗಳು ಚಿಕ್ಕ ಚಿಕ್ಕ ರಚನೆಗಳಾಗಿದ್ದು ಶರಣರ ವಚನದಂತೆ, ಸಂಸ್ಕೃತದ ಶ್ಲೋಕದಂತೆ ಕಾಣುತ್ತದೆ. ಒಂದೇ ರಾಗದಲ್ಲಿ ಸುಶ್ರಾವ್ಯವಾಗಿ ಹಾಡಬಹುದು.
ಸಾಮಾನ್ಯವಾಗಿ ದ್ವಿತೀಯ ಪ್ರಾಸವಿರುತ್ತದೆ. ಕೆಲವೊಮ್ಮೆ ಅಂತಪಾಸವಿರುವುದೂ ಉಂಟು. ಕೊನೆಯಲ್ಲಿ ದಾಸರ ಅಂಕಿತವಿರುತ್ತದೆ. ಕೀರ್ತನೆಗಳಲ್ಲಿರುವ ವಸ್ತು ವಿಶೇಷಗಳಾದ ಹರಿನಾಮ ಸ್ಮರಣೆ ಮತ್ತು ಮಹಿಮ, ಹರಿಭಕ್ತಿ ಅನುಭವಗಳು ಇವೆ. ಅನುಭವ ಹೆಚ್ಚಾದಂತೆ ಮಾತು ಮಿತವಾಗುತ್ತದೆಂಬ ತತ್ವವನ್ನು ದತ್ತು ತಮ್ಮ ಉಗಾಭೋಗಗಳ ಮೂಲಕ ಸತ್ಯವಾಗಿಸಿದ್ದಾರೆ. ಹರಿದಾಸರು ಉನ್ನತ ಆಧ್ಯಾತ್ಮಿಕ ತತ್ವದರ್ಶನ ನೀಡಿದ ಹಿರಿಯ ಅನುಭಾವಿಗಳೆಂದು ಇಂತಹ ರಚನೆಗಳಿಂದ ತಿಳಿಯ ಬಹುದಾಗಿದೆ.!
ದಂಡಕ :- ಗದ್ಯ - ಪದ್ಯಗಳ ಮೇಳ, ಹರಿದಾಸ ಸಾಹಿತ್ಯದಲ್ಲಿ ದೊರೆತಿರುವ ಏಕೈಕ ದಂಡಕ ಶ್ರೀಪಾದರಾಜರ ಶ್ರೀ ಲಕ್ಷ್ಮೀನರಸಿಂಹ ಪ್ರಾದುರ್ಭಾವ ದಂಡಕ.
ವೃತ್ತನಾಮ :- ವೃತ್ತನಾಮ ಮತ್ತು ದಂಡಕಗಳು ದಾಸ ಸಾಹಿತ್ಯದಲ್ಲಿ ಅಪರೂಪವಾಗಿ ಕಂಡು ಬರುವ ಸಾಹಿತ್ಯ ಪ್ರಕಾರಗಳು. ವೃತ್ತನಾಮದಲ್ಲಿ ಒಂದುಪದ, ಒಂದುಶ್ಲೋಕ, ಒಂದುಪದ, ಒಂದುಶೋಕ ಈ ಪ್ರಕಾರದಲ್ಲಿ ಮುಂದುವರಿಯುತ್ತದೆ.
ಮುಂಡಿಗೆ :- ಪೌರಾಣಿಕ, ಆಧ್ಯಾತ್ಮಿಕ ಅಂಶಗಳಿಂದ ಕೂಡಿರುವ ಚಮತ್ಕಾರದ ನುಡಿಗಳು. ಇವುಗಳು ಒಗಟಿನ ರೂಪದಲ್ಲಿ ರಚಿತವಾಗಿರುತ್ತವೆ. ಕೀರ್ತನೆ ಉಗಾಭೋಗಗಳಂತೆ ಪ್ರಾಸವಿದ್ದು ರಾಗ ತಾಳಗಳ ನಿರ್ಬಂಧವಿಲ್ಲದ ಹಾಡುಗಳಾಗಿರುತ್ತವೆ. ಬೆಡಗಿನ ವಚನಗಳಿಗೆ ಸಂವಾದಿ ಎನ್ನಬಹುದು.
ವ್ಯಾಸಕೂಟ : ಸಂಸ್ಕೃತ ಭಾಷೆಯಲ್ಲಿ ತತ್ವ ಪ್ರಸಾರ ಮಾಡಿದ, ಶಾಸ್ತ್ರವೇತ್ತರನ್ನು ವ್ಯಾಸಕೂಟದವರೆಂದು ಕರೆಯುವರು.
ದಾಸಕೂಟ : ವ್ಯಾಸರಾಯರು ತಮ್ಮ ಶಿಷ್ಯವೃಂದಕ್ಕೆ ದಾಸ ದೀಕೆಯಿತ್ತು ಹರಿದಾಸರೆಂದರೆ ಹೇಗಿರಬೇಕು, ಅವರ ದಿನಚರಿ, ಮನೋಭಾವ, ಕಾರವೈಖರಿ, ವೇಷಭೂಷಣ ಹೀಗೆ ಎಲ್ಲವನ್ನು ರೂಪಿಸಿದೆ. ಜಾತಿ – ಮತಗಳ ಕಟ್ಟುಪಾಡುಗಳು ಇಲ್ಲದ ಹರಿದಾಸರ ಪರಂಪರೆಯನ್ನು ದಾಸಕೂಟವೆಂದು ಕರೆಯುತ್ತಾರೆ. ಬ್ರಾಹ್ಮಣರಲ್ಲದ ಹರಿದಾಸರು ಅಲ್ಲಿದ್ದರು. ಜಾನಪದ ನೆಲೆಯಿಂದ ಬಂದ 'ದಾಸ'ರ ವೇಷವನ್ನು ಹರಿದಾಸರಿಗೂ ಕೊಡಿಸಿ ತಾಳ, ತಂಬೂರಿಗಳನ್ನು ಓಡಿಸಿ ಕಾಲಿಗೆ ಗೆಜ್ಜೆ ಕಟ್ಟಿ ಕೈಯಲ್ಲಿ ಚಿಟಿಕೆ ನುಡಿಸುತ್ತಾ ಹರಿನಾಮವನ್ನು ಹಾಡುತ್ತಾ ಮನೆಮನೆಯ ಬಾಗಿಲಿಗೆ ಹರಿಭಕ್ತಿಯನ್ನು ಕೊಂಡೊಯ್ದರೆ ಹರಿದಾಸರು, ದಾಸಕೂಟದ ಮಹನೀಯರು. ಕನಕ ಪುರಂದರರು ಈ ಪರಂಪರೆಯ ಅಶ್ವಿನಿದೇವತೆಗಳು. ಇವರಿಬ್ಬರಿಗೂ ವ್ಯಾಸರಾಯರೇ ಗುರುಗಳು. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು ಈ ಮೂವ್ವರು ವ್ಯಾಸಕೂಟವನ್ನು ಮತ್ತು ದಾಸಕೂಟವನ್ನು ಸಮರ್ಥವಾಗಿ ಮುನ್ನಡೆಸಿದರು.