ಪಾಠ-2. ಶಬರಿ
ಆಧಾರ : ಶ್ರೀರಾಮಾಯಣ ದರ್ಶನಂ: ಶಬರಿ
ಆಧಾರ : ಶ್ರೀರಾಮಾಯಣ ದರ್ಶನಂ: ಶಬರಿ
ಶಬರಿ ಒಬ್ಬ ಬೇಡಿತಿ. ಭಕ್ತಿಮಾರ್ಗದ ಪ್ರತಿಪಾದನೆಯನ್ನು ಶಬರಿಯ ಜೀವನದಲ್ಲಿ ಕಾಣುತ್ತೇವೆ. ಮತಂಗಮುನಿಯ ಶಿಷ್ಯೆ. ಎಷ್ಟೋ ವರ್ಷಗಳಿಂದ ಶಿಷ್ಯವೃತ್ತಿಯನ್ನು ಕೈಕೊಂಡು, ವೈರಾಗ್ಯಪರಳಾಗಿ, ಸಾಧನಾ ನಿರತಳಾಗಿದ್ದಾಳೆ. ಭಗವತ್ ಸಾಕ್ಷಾತ್ಕಾರವನ್ನು ಪಡೆಯಲು ಹೆಣ್ಣಿನ ಬಾಳಿಗೆ ಇತರ ಮಾರ್ಗಗಳಿಗಿಂತ ಭಕ್ತಿ ಮಾರ್ಗ ಸುಲಭ. ದೇವರ್ಷಿ ಆದಿಕವಿಯಾಗಲಿದ್ದ ವ್ಯಾಧನಿಗೆ ರಾಮಮಂತ್ರವನ್ನು ಉಪದೇಶಿಸಿದಂತೆ ಮತಂಗ ಋಷಿ ಆ ಮಾತಂಗಿಗೆ ರಾಮಮಹಿಮೆಯನ್ನು ಬೋಧಿಸಿದನು, ರಾಮ ಮಂತ್ರವನ್ನು ಉಪದೇಶಿಸಿದನು. ಆ ರಸಮಂತ್ರವೆ ಅವಳ ಬಾಳಿನ ಮಂತ್ರವಾಯಿತು; ಬಾಳಿಕೆ ಊರುಗೋಲಾಯಿತು; ಕಣ್ಣಾಯಿತು, ಮತಿಯಾಯಿತು, ಉಸಿರಾಯಿತು, ಗತಿಯಾಯಿತು; ಕೇಳಿದುದೆಲ್ಲ ರಾಮಮಂತ್ರ ವಾಯಿತು. ನುಡಿದುದೆಲ್ಲ ರಾಮಕಥೆಯಾಯಿತು; ಗುರು ವರ್ಣಿಸಿದ, ತಾನು ಊಹಿಸಿಕೊಂಡ ರಾಮ ಮಾತ್ರ ಬರಲಿಲ್ಲ. ಗುರುವನ್ನು ಕೇಳಿದಳು ದರ್ಶನೋತ್ಕಂಠೆಯಾಗಿ, ದರ್ಶನೋನ್ಮತ್ತ ಳಾಗಿ ‘ರಾಮ ಎಂದು ಬರುವ’ನೆಂದು. ಆ ಋಷಿ ‘ತಾಳ್ಮೆ ತಾಯಿ, ತಾಳ್ಮೆ’ ಎಂದ. ಎಷ್ಟು ದಿನ ತಾಳುವುದು? ತಾಳಿ ಆಯಿತು, ನಿರೀಕ್ಷಿಸಿ ಆಯಿತು, ಬೇಡಿ ಆಯಿತು ಹಾಗೂ ಬರಲಿಲ್ಲ. ಭಕ್ತೆಯ ಮೊರೆ ಅವನಿಗೆ ಕೇಳಿಸಲಿಲ್ಲವೆ? ಕೇಳಿಸಲೊಲ್ಲದೇಕೆ? ಕೇಳಿಸದಿರುತ್ತದೆಯೆ? ಎಷ್ಟು ಜನ ‘ಸಾಮೀಲು’ ಅವಳಿಗೆ ರಾಮನನ್ನು ಕರೆತರುವುದಕ್ಕೆ? ಮಂಥರೆ, ಕೈಕೆ, ರಾವಣ; ಭರದ್ವಾಜ, ಅತ್ರಿ, ಅನಸೂಯೆ, ಅಗಸ್ತ್ಯ; ವಿರಾಧ, ಕಬಂಧ – ಎಲ್ಲರೂ ಅವಳಿಗೆ ಬೆಂಬಲ; ಅಥವಾ ಅವರೆಲ್ಲ ಶಬರಿಗೆ ಕೃತಜ್ಞರೊ! ಬಾ ಎಂದಾಗ ಬಂದು, ಹೋಗೆಂದಾಗ ಹೋಗುವ ಸುಲಭನಲ್ಲ ಭಗವಂತ; ತಿಂಡಿ ತೋರಿಸಿದೊಡನೆ ಬಿದ್ದೆದ್ದು ಓಡಿಬರುವ ಕಂದನೂ ಅಲ್ಲ ಅವನು. ಭಕ್ತನು ನಿರೀಕ್ಷೆಯಲ್ಲಿ ಬೆಂದು ಹಸನಾಗಬೇಕು, ಕಾದು ಕಾದು ಹಣ್ಣಾಗಬೇಕು. ತಪಸ್ಸು ಎಂದಿಗೂ ನಿಷ್ಫಲವಲ್ಲ. ಇಂದು ಬಂದಾನೇನೊ, ನಾಳೆ ಬಂದಾನೇನೊ ಎಂದು ನಿತ್ಯವೂ ಹೊಸ ಹೊಸ ಹಣ್ಣು ಜೇನು ಮಣಿಹೆಂಬೆ ಗೆಣಸುಗಳನ್ನು ಅಣಿಗೊಳಿಸುವಳು. ಅದೆಲ್ಲ ಅವನಿಗಾಗಿಯೇ ಮುಡಿಪು. ಮುಡಿಪು ಸ್ವೀಕರಿಸಲು ರಾಮನಂತು ಬರಲಿಲ್ಲ. ಅದು ಉಳಿಯುವಂತೆಯೂ ಇಲ್ಲ. ಹಾದಿ ಬಳಿಯ ಗುಡಿಸಲು. ನೆಂಟರೊ ಇಷ್ಟರೊ ದಾರಿಹೋಕರೊ ಬಂದು ತಂಗುತ್ತಾರೆ. ಎಷ್ಟಾದರೂ ಅವಳು ಗೃಹಪತ್ನಿಯಲ್ಲವೆ? ಅತಿಥಿ ಸತ್ಕಾರ ಗೃಹಸ್ಥರ ಪ್ರಥಮ ಕರ್ತವ್ಯ; ಅತಿಥಿ ಧಿಕ್ಕಾರವೆ ಆತ್ಮತಿರಸ್ಕಾರ. ಇಷ್ಟದೇವತೆಯೆ ಅತಿಥಿ ವೇಷದಲ್ಲಿ ಬರಬಹುದು. ಆದುದರಿಂದ ಆ ಮೀಸಲಿಗೆ ಅವರೇ ಅಧಿಕಾರಿಗಳು. ಅಂತು ಹೀಗೆ ದಿನಗಳುರುಳಿದುವು, ತಿಂಗಳುಗಳುರುಳಿದುವು, ಸಂವತ್ಸರಗಳುರುಳಿದುವು. ಕಾದು ಕಾದು ಚರ್ಮ ಸುಕ್ಕಾಯಿತು; ರಾಮಮಂತ್ರದ ಮಹಿಮೆಯಿಂದ ತಲೆಕೂದಲು ಪುಂಡಿನಾರಿನಂತೆ ಬಿಳುಪಾಯಿತು, ವೈರಾಗ್ಯದ ಮಹಿಮೆಯಿಂದ ಹಲ್ಲುದುರಿ ಬಾಯಿ ಬೋಡಾಯಿತು; ಚಿಂತೆಯ ಭಾರದಿಂದ ಬೆನ್ನು ಬಾಗಿತು; ಆತ್ಮಾನಂದದಿಂದ ಮೈಯಲ್ಲಿ ಭಾವವಿದ್ಯುತ್ ಪ್ರವಹಿಸಿದಂತಾಗಿ ನಡುಕು ಹುಟ್ಟಿತು; ಎವೆಯಿಕ್ಕದೆ ನೋಡಿ ನೋಡಿ ಕಣ್ಣು ಮಬ್ಬಾದುವು. ಆದರೂ ರಾಮ ಬರಲಿಲ್ಲ. ಆಸೆ ನಿರಾಶೆಗಳ ನಡುವೆ ಅವಳ ಮನಸ್ಸು ತೂಗುಯ್ಯಲೆಯಾಯಿತು.
ಅದೊಂದು ನಟ್ಟಿರುಳು. ಹಾಲ್ದಿಂಗಳು ತಿರೆಯ ಮೇಲೆ ಹರಡಿದೆ. ಮುದುಕಿ ಏನೊ ಕನಸು ಕಂಡಂತಾಗಿ ಮುಗುಳು ನಗುತ್ತ ಹಾಸುಗೆಯ ಮೇಲೆ ಎದ್ದು ಕುಳಿತಳು. ಸ್ವಪ್ನದರ್ಶನದ ವಿಯದ್ವರ್ಣಿ ರಾಮಚಂದ್ರನನ್ನು ಚಿತ್ರಿಸಿಕೊಂಡಳು; ಹಿರಿ ಹಿರಿ ಹಿಗ್ಗಿದಳು. ಗುಡಿಯ ಬಾಗಿಲನ್ನು ತೆರೆದು ಹೊರಗೆ ನೋಡಿದಳು. ಆ ರಾತ್ರಿಗೂ ಮುದುಕಿಯನ್ನು ಕಂಡರೆ ಕನಿಕರ; ಕನಿಕರದಿಂದ ಕರಗಿ ತಿಂಗಳು ಬೆಳಕಾಯಿತಂತೆ. ಇದು ಕೇವಲ ಅಲಂಕಾರಕ್ಕಾಗಿ ಪಾಂಡಿತ್ಯ ಪ್ರದರ್ಶನಕ್ಕಾಗಿ ಕವಿ ಹೇಳಿದ ಮಾತಲ್ಲ. ನಿತ್ಯಸತ್ಯವನ್ನು ಪ್ರಕಟಗೊಳಿಸುವ ದರ್ಶನಧ್ವನಿ ಆ ಮಾತುಗಳಲ್ಲಿ ಅಂತರ್ನಿಹಿತವಾಗಿದೆ. ಶಬರಿ ಸುತ್ತಲೂ ತೃಷಿತ ದೃಷ್ಟಿಯನ್ನಟ್ಟಿದಳು: ಮೇಲೆ ಚಂದ್ರಿಕಾಸಂಪದ್ಯುಕ್ತವಾದ ನೀಲಾಕಾಶ, ಕೆಳಗೆ ದಿಟ್ಟಿ ಸೋಲುವ ತನಕ ಹಬ್ಬಿದ್ದ ಹಸುರಿನ ಕಡಲು : ಒಂದು ರಾಮಶಕ್ತಿ, ಮತ್ತೊಂದು ಸೀತಾಶಕ್ತಿ. ಅವಳ ಮನಸ್ಸು ಅವುಗಳಲ್ಲಿ ಲಯವಾಯಿತು. ತನ್ನೊಳಗೆ ತಾನು ‘ರಾಮಚಂದ್ರಯ್ಯ, ನೀನೆಂದು ಬರುವೆ? ಗುರುವಿನ ಮಾತು ಸುಳ್ಳೆ? ಹತ್ತು ವರ್ಷಗಳಿಂದ ಕಾಯುತ್ತಿದ್ದೇನೆ. ದೇಹ ಹಣ್ಣಾಯಿತು. ಎಷ್ಟು ದಿನ ಇದು ಉಳಿದೀತು. ಇದು ಉಳಿದರೂ ದಿಟ್ಟಿ ಉಳಿಯುತ್ತದೆಯೆ? ಕೈಯಿಂದ ಮೈಸವರಿ ಸಂತೋಷಪಡಬಹುದಾದರೂ ಕಣ್ಣನ್ನು ತಣಿಸುವುದು ಹೇಗೆ? ಬಾ, ಬೇಗ ಬಾ’ ಎಂದು ಪ್ರಲಾಪಿಸಿದಳು, ನಟ್ಟಿರುಳಿನ ಶಾಂತಿಗೆ ಭಂಗ ಬರದಂತೆ. ನಿರಾಶೆಯ ಮತ್ತೊಂದಿರುಳು ಕಳೆಯಿತು.
ಶಬರಿಯ ಆಸೆಯೆಂಬಂತೆ, ಅವಳ ತಪಃಫಲವೆಂಬ ರಘುಕುಲದ ದೇವತೆ ಮೂಡಿತು. ಪರ್ಣಕುಟಿಯ ಸುತ್ತ ಬಿಲ್ಲೆತ್ತರ ಬೆಳೆದಿದ್ದ ಹುಲ್ಲೂ ಮಾತಂಗಿಯಂತೆ ನಿಟ್ಟುಸಿರುಬಿಡುತ್ತಿತ್ತು. ಇಬ್ಬರೂ ಸಮಾನ ಧರ್ಮಿಗಳು. ತನ್ನ ಪರ್ಣಕುಟಿಯ ಸುತ್ತಮುತ್ತಣ ಸಚರಾಚರ ವಸ್ತುಗಳೆಲ್ಲ ತನ್ನಂತೆಯೆ ಸಾಧನಾ ನಿರತವಾಗಿವೆ ಯೆಂದು ಅವಳ ಭಾವನೆ. ಅವೂ ನಿರೀಕ್ಷೆಯ ತಪಸ್ಸನ್ನಾಚರಿಸುತ್ತಿವೆ ಎಂದು ಅವಳ ಅಚಲ ನಂಬಿಕೆ. ಪರಾಭಕ್ತಿಯ ಸ್ಥಿತಿಯಿದು. ಮುದುಕಿಯ ಮನಸ್ಸಿನಲ್ಲಿ ಏನೊ ಕಳವಳ. ಒಂದೆಡೆ ನಿಲ್ಲಳು, ಕೂರಳು, ಹಾದಿಯನ್ನೆ ನಿಟ್ಟಿಸಿ ನೋಡುತ್ತಾಳೆ. ಯಾರೂ ಕಾಣಿಸರು. ತನ್ನೊಳಗೆ ಗೊಣಗಿಕೊಳ್ಳುತ್ತಾಳೆ. ಒಳಗೆ ಹೋಗಿ ತೆಂಗಿನ ಪೊರಕೆಯನ್ನು ತಂದು ಗುಡಿಸಲ ಮುಂದೆ ಗುಡಿಸಿ, ಸೊಂಟದ ಮೇಲೆ ಕೈಯಿಟ್ಟು ನಿಲ್ಲುತ್ತಾಳೆ. ಈ ಕಳವಳದ ಗೊಂದಲದಲ್ಲಿ ಮಧ್ಯಾಹ್ನವೂ ಸಾರಿತು. ದೂರದಲ್ಲಿ ಯಾರೊ ಬರುತ್ತಿರುವಂತೆ ಕಂಡಿತು. ನೋಡುತ್ತ ನಿಂತಳು. ಆ ನಿಂತ ಮುದುಕಿಯ ಚಿತ್ರ ಅನ್ಯಾದೃಶವಾದುದು! ಕಾವ್ಯಮಯವಾದುದು!
……ನಿಂತಳ್ ಶಬರಿ ಡೊಂಕಾಗಿ;
ಕಟಿಗೊಂದು ಕೈಯಾಗೆ, ಪಣೆಗೊಂದು ಕೈಯೆತ್ತಿ,
ಸುರ್ಕ್ಕು ತಾಂ ಪುರ್ಬಿನ ತೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್…..ನೋಡಿದಳ್……ಕಣ್ಮೊಳೆಯ ಕೀಲ್ಮಾಡಿ
ದೇಶದೇಹವನಂತೆ ತನ್ನ ಸಂದೇಹಮಂ
ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿ ಮರಳಿ!……
‘ಕೊರೆದಳ್’ ಶಬ್ದ ದ್ವಿರುಕ್ತಿಯೂ, ‘ತಿರುಪ್ಪಿ’ ಪದದಿಂದ ಹೊಮ್ಮುವ ಶಬ್ದಾರ್ಥ ರಸದರ್ಶನ ಧ್ವನಿಗಳೂ ಆಸ್ವಾದನೀಯ! ನಿರಾಶೆಯ ತಾಪದ ನಿರೀಕ್ಷೆ ಉತ್ಕಟಸ್ಥಿತಿಗೇರಿದಾಗಳೆ ಸಿದ್ದಿ ಕೈಸಾರುವುದು. ಬಂದವರು ಯಾರು? ತನ್ನ ಆರಾಧ್ಯದೇವತೆಗಳೆ? – ಪೊದೆಯಂತೆ ಕೆದರಿದ ತಲೆಯ ಕೊಳೆ ಬೆವರಿಡಿದ ಉಡುಗೆಯ, ಕಾಂತಿಹೀನವಾದ ಮುಖದ, ವಿರಹದಗ್ಧವಾದ ದೇಹದ ರೂಕ್ಷರೂಪದ ರಾಮನನ್ನು ಕಂಡು ಶಬರಿ ಬೇಡನೆಂದು ಬಗೆದಳು – ಬಂದವರು ನೆಂಟರಿರ ಬಹುದೆಂದು ಭಾವಿಸಿ, ಉಡುಗಿದ ಸಂತೋಷದಿಂದ ಅವರನ್ನೆ ನೋಡುತ್ತಿರಲು ಲಕ್ಷ್ಮಣ.
………ದಣಿದು ಬಂದಿಹೆವಜ್ಜೆ!
ಬಿಸಿಲಳುರುತಿದೆ ಗುಡಿಸಲೊಳಗಿನಿತು ತಾವಿತ್ತು,
ತಿನಲಿತ್ತು, ಕರುಣಿಸೈ ನಿನ್ನ ಈ ಪರದೇಶಿ
ಕಂದರಂ ಚಿರಋಣಿಗಳಂ!
ದಶರಥ ಚಕ್ರವರ್ತಿಯ ಮಕ್ಕಳೀಗ ‘ಪರದೇಶಿಕಂದ’ರು! ಶಬರಿಯ ‘ಕಂದ’ರು ನಿಜ. ಅವಳು ರಾಮನನ್ನು ಉಪಾಸಿಸುತ್ತಿದ್ದುದು ವಾತ್ಸಲ್ಯಭಾವದಿಂದ. ಲಕ್ಷ್ಮಣನ ಮಾತುಗಳನ್ನು ಕೇಳಿದ ಸದ್ಗೃಹಿಣಿ ಶಬರಜ್ಜಿಯ ಮನಸ್ಸು ತುಸು ಕೆರಳಿತು. ನಿರಾಶಾಗ್ನಿ ರಾಮನನ್ನೆಂತು ದಹಿಸುತ್ತಿದೆಯೊ ಶಬರಿಯನ್ನೂ ದಹಿಸುತ್ತಿದೆ. ಸೀತೆಯ ಮೇಲಣ ಪ್ರೇಮೋನ್ಮತ್ತತೆ ಶಬರಿಯ ನಿರಾಶೆಗೆ ಮೂಲವಾಗಿದೆ.
……….ಕಂಡವರ್ಗೆಲ್ಲ,
ಬರ್ಪ ಬೇಡರ್ಗೆಲ್ಲಮುಣಿಸಿತ್ತು, ಬೀಡಿತ್ತು,
ಮೆಲ್ವಾಸನೀಯೆ ನಾನೇನು ಅಡುಗೂಳಜ್ಜಿ ಅಲ್ಲ ಕಾಣಯ್ಯ!…… ಎಂದು ನಿಷ್ಠುರವಾಗಿ ನುಡಿಯುತ್ತಾಳೆ. ಈ ನೈಷ್ಠುರ್ಯ ಆ ಸಾತ್ವಿಕ ಪ್ರೇಮದ ಮತ್ತೊಂದು ರೂಪತಾನೆ! ಆದುದರಿಂದ ಅದು ಎಷ್ಟು ಹೊತ್ತು ಸ್ಥಾಯಿಯಾಗಿದ್ದೀತು? ಒಡನೆಯೆ “ಬಡವಳಿದ್ದುದನೀವೆ; ಬನ್ನಿಂ!” ಎಂದು ಒಳಗೆ ನಡೆದಳು. ಲಕ್ಷ್ಮಣ ಅಣ್ಣನ ಕಡೆ ನೋಡಿ ನಕ್ಕನು. ಒಳಗೆ ಬಂದ ಮೇಲೆ ಶಬರಿ ಮತ್ತೆ ಅವರನ್ನು ನೋಡಿದಳು – ಶಂಕೆಯಿಂದ. “ನೀವಾರು, ಎಲ್ಲಿಯವರು” ಎಂದು ಕೇಳಿದಳು. ಬಾಯಿ ತುಂಬ ‘ಕಂದರಿರ’ ಎಂದು ಸಂಬೋಧಿಸಿದಳು. ದಶರಥ ಕುಮಾರ, ಊರ್ಮಿಳಾ ಪ್ರಿಯ ಮತ್ತೆ “ಮನೆಯಿಲ್ಲ ಮಾರಿಲ್ಲ; ಮನೆಗೆಟ್ಟವರು ನೆಲೆಗೆಟ್ಟವರೆಂ”ದು ಉತ್ತರ ಹೇಳಿ “ಸ್ನಾನ ಮಾಡಲು ಕೊಳವೆಲ್ಲಿದೆ?” ಎಂದು ಕೇಳಿದನು. ‘ಬೇಡರಿಗೆ ಸ್ನಾನವೇಕೆಂದು’ ಅವಳು ವಿಸ್ಮಯಪಟ್ಟಳು. ಕೊಳವಿದ್ದ ಜಾಗವನ್ನು ತೋರಿಸುತ್ತ.
ನಿಮ್ಮಂತೆ ಮನೆಗೆಟ್ಟು ನೆಲೆಗೆಟ್ಟು ತೊಳಲುವರ್
ಈ ನಾಡೊಳೆನಿಬರೋ? ಏಂ ಕೇಡುಗಾಲಮೋ?
ಅರಗುಲಿಗಳೊರ್ವನ ಸತಿಗೆ ಮತ್ತೋರ್ವನಳುಪುವಂ!
ಎಂದಳು. ರಾಮ ಬೆಚ್ಚಿ ಕೇಳಿದನು: “ಆರ ಸತಿಗಾರಳುಪಿದರು, ಅಜ್ಜಿ?” ಎಂದು. “ಊಟವಾದ ಮೇಲೆ ಆ ಹೊಲಸು ಕತೆಯನ್ನು ಹೇಳುತ್ತೇನೆ. ಮಿಂದು ಬಾ” ಎಂದು ಹೇಳಿ ಕಳುಹಿಸಿದಳು.
ಶಬರಿಯ ಆಸೆಯೆಂಬಂತೆ, ಅವಳ ತಪಃಫಲವೆಂಬ ರಘುಕುಲದ ದೇವತೆ ಮೂಡಿತು. ಪರ್ಣಕುಟಿಯ ಸುತ್ತ ಬಿಲ್ಲೆತ್ತರ ಬೆಳೆದಿದ್ದ ಹುಲ್ಲೂ ಮಾತಂಗಿಯಂತೆ ನಿಟ್ಟುಸಿರುಬಿಡುತ್ತಿತ್ತು. ಇಬ್ಬರೂ ಸಮಾನ ಧರ್ಮಿಗಳು. ತನ್ನ ಪರ್ಣಕುಟಿಯ ಸುತ್ತಮುತ್ತಣ ಸಚರಾಚರ ವಸ್ತುಗಳೆಲ್ಲ ತನ್ನಂತೆಯೆ ಸಾಧನಾ ನಿರತವಾಗಿವೆ ಯೆಂದು ಅವಳ ಭಾವನೆ. ಅವೂ ನಿರೀಕ್ಷೆಯ ತಪಸ್ಸನ್ನಾಚರಿಸುತ್ತಿವೆ ಎಂದು ಅವಳ ಅಚಲ ನಂಬಿಕೆ. ಪರಾಭಕ್ತಿಯ ಸ್ಥಿತಿಯಿದು. ಮುದುಕಿಯ ಮನಸ್ಸಿನಲ್ಲಿ ಏನೊ ಕಳವಳ. ಒಂದೆಡೆ ನಿಲ್ಲಳು, ಕೂರಳು, ಹಾದಿಯನ್ನೆ ನಿಟ್ಟಿಸಿ ನೋಡುತ್ತಾಳೆ. ಯಾರೂ ಕಾಣಿಸರು. ತನ್ನೊಳಗೆ ಗೊಣಗಿಕೊಳ್ಳುತ್ತಾಳೆ. ಒಳಗೆ ಹೋಗಿ ತೆಂಗಿನ ಪೊರಕೆಯನ್ನು ತಂದು ಗುಡಿಸಲ ಮುಂದೆ ಗುಡಿಸಿ, ಸೊಂಟದ ಮೇಲೆ ಕೈಯಿಟ್ಟು ನಿಲ್ಲುತ್ತಾಳೆ. ಈ ಕಳವಳದ ಗೊಂದಲದಲ್ಲಿ ಮಧ್ಯಾಹ್ನವೂ ಸಾರಿತು. ದೂರದಲ್ಲಿ ಯಾರೊ ಬರುತ್ತಿರುವಂತೆ ಕಂಡಿತು. ನೋಡುತ್ತ ನಿಂತಳು. ಆ ನಿಂತ ಮುದುಕಿಯ ಚಿತ್ರ ಅನ್ಯಾದೃಶವಾದುದು! ಕಾವ್ಯಮಯವಾದುದು!
……ನಿಂತಳ್ ಶಬರಿ ಡೊಂಕಾಗಿ;
ಕಟಿಗೊಂದು ಕೈಯಾಗೆ, ಪಣೆಗೊಂದು ಕೈಯೆತ್ತಿ,
ಸುರ್ಕ್ಕು ತಾಂ ಪುರ್ಬಿನ ತೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್…..ನೋಡಿದಳ್……ಕಣ್ಮೊಳೆಯ ಕೀಲ್ಮಾಡಿ
ದೇಶದೇಹವನಂತೆ ತನ್ನ ಸಂದೇಹಮಂ
ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿ ಮರಳಿ!……
‘ಕೊರೆದಳ್’ ಶಬ್ದ ದ್ವಿರುಕ್ತಿಯೂ, ‘ತಿರುಪ್ಪಿ’ ಪದದಿಂದ ಹೊಮ್ಮುವ ಶಬ್ದಾರ್ಥ ರಸದರ್ಶನ ಧ್ವನಿಗಳೂ ಆಸ್ವಾದನೀಯ! ನಿರಾಶೆಯ ತಾಪದ ನಿರೀಕ್ಷೆ ಉತ್ಕಟಸ್ಥಿತಿಗೇರಿದಾಗಳೆ ಸಿದ್ದಿ ಕೈಸಾರುವುದು. ಬಂದವರು ಯಾರು? ತನ್ನ ಆರಾಧ್ಯದೇವತೆಗಳೆ? – ಪೊದೆಯಂತೆ ಕೆದರಿದ ತಲೆಯ ಕೊಳೆ ಬೆವರಿಡಿದ ಉಡುಗೆಯ, ಕಾಂತಿಹೀನವಾದ ಮುಖದ, ವಿರಹದಗ್ಧವಾದ ದೇಹದ ರೂಕ್ಷರೂಪದ ರಾಮನನ್ನು ಕಂಡು ಶಬರಿ ಬೇಡನೆಂದು ಬಗೆದಳು – ಬಂದವರು ನೆಂಟರಿರ ಬಹುದೆಂದು ಭಾವಿಸಿ, ಉಡುಗಿದ ಸಂತೋಷದಿಂದ ಅವರನ್ನೆ ನೋಡುತ್ತಿರಲು ಲಕ್ಷ್ಮಣ.
………ದಣಿದು ಬಂದಿಹೆವಜ್ಜೆ!
ಬಿಸಿಲಳುರುತಿದೆ ಗುಡಿಸಲೊಳಗಿನಿತು ತಾವಿತ್ತು,
ತಿನಲಿತ್ತು, ಕರುಣಿಸೈ ನಿನ್ನ ಈ ಪರದೇಶಿ
ಕಂದರಂ ಚಿರಋಣಿಗಳಂ!
ದಶರಥ ಚಕ್ರವರ್ತಿಯ ಮಕ್ಕಳೀಗ ‘ಪರದೇಶಿಕಂದ’ರು! ಶಬರಿಯ ‘ಕಂದ’ರು ನಿಜ. ಅವಳು ರಾಮನನ್ನು ಉಪಾಸಿಸುತ್ತಿದ್ದುದು ವಾತ್ಸಲ್ಯಭಾವದಿಂದ. ಲಕ್ಷ್ಮಣನ ಮಾತುಗಳನ್ನು ಕೇಳಿದ ಸದ್ಗೃಹಿಣಿ ಶಬರಜ್ಜಿಯ ಮನಸ್ಸು ತುಸು ಕೆರಳಿತು. ನಿರಾಶಾಗ್ನಿ ರಾಮನನ್ನೆಂತು ದಹಿಸುತ್ತಿದೆಯೊ ಶಬರಿಯನ್ನೂ ದಹಿಸುತ್ತಿದೆ. ಸೀತೆಯ ಮೇಲಣ ಪ್ರೇಮೋನ್ಮತ್ತತೆ ಶಬರಿಯ ನಿರಾಶೆಗೆ ಮೂಲವಾಗಿದೆ.
……….ಕಂಡವರ್ಗೆಲ್ಲ,
ಬರ್ಪ ಬೇಡರ್ಗೆಲ್ಲಮುಣಿಸಿತ್ತು, ಬೀಡಿತ್ತು,
ಮೆಲ್ವಾಸನೀಯೆ ನಾನೇನು ಅಡುಗೂಳಜ್ಜಿ ಅಲ್ಲ ಕಾಣಯ್ಯ!…… ಎಂದು ನಿಷ್ಠುರವಾಗಿ ನುಡಿಯುತ್ತಾಳೆ. ಈ ನೈಷ್ಠುರ್ಯ ಆ ಸಾತ್ವಿಕ ಪ್ರೇಮದ ಮತ್ತೊಂದು ರೂಪತಾನೆ! ಆದುದರಿಂದ ಅದು ಎಷ್ಟು ಹೊತ್ತು ಸ್ಥಾಯಿಯಾಗಿದ್ದೀತು? ಒಡನೆಯೆ “ಬಡವಳಿದ್ದುದನೀವೆ; ಬನ್ನಿಂ!” ಎಂದು ಒಳಗೆ ನಡೆದಳು. ಲಕ್ಷ್ಮಣ ಅಣ್ಣನ ಕಡೆ ನೋಡಿ ನಕ್ಕನು. ಒಳಗೆ ಬಂದ ಮೇಲೆ ಶಬರಿ ಮತ್ತೆ ಅವರನ್ನು ನೋಡಿದಳು – ಶಂಕೆಯಿಂದ. “ನೀವಾರು, ಎಲ್ಲಿಯವರು” ಎಂದು ಕೇಳಿದಳು. ಬಾಯಿ ತುಂಬ ‘ಕಂದರಿರ’ ಎಂದು ಸಂಬೋಧಿಸಿದಳು. ದಶರಥ ಕುಮಾರ, ಊರ್ಮಿಳಾ ಪ್ರಿಯ ಮತ್ತೆ “ಮನೆಯಿಲ್ಲ ಮಾರಿಲ್ಲ; ಮನೆಗೆಟ್ಟವರು ನೆಲೆಗೆಟ್ಟವರೆಂ”ದು ಉತ್ತರ ಹೇಳಿ “ಸ್ನಾನ ಮಾಡಲು ಕೊಳವೆಲ್ಲಿದೆ?” ಎಂದು ಕೇಳಿದನು. ‘ಬೇಡರಿಗೆ ಸ್ನಾನವೇಕೆಂದು’ ಅವಳು ವಿಸ್ಮಯಪಟ್ಟಳು. ಕೊಳವಿದ್ದ ಜಾಗವನ್ನು ತೋರಿಸುತ್ತ.
ನಿಮ್ಮಂತೆ ಮನೆಗೆಟ್ಟು ನೆಲೆಗೆಟ್ಟು ತೊಳಲುವರ್
ಈ ನಾಡೊಳೆನಿಬರೋ? ಏಂ ಕೇಡುಗಾಲಮೋ?
ಅರಗುಲಿಗಳೊರ್ವನ ಸತಿಗೆ ಮತ್ತೋರ್ವನಳುಪುವಂ!
ಎಂದಳು. ರಾಮ ಬೆಚ್ಚಿ ಕೇಳಿದನು: “ಆರ ಸತಿಗಾರಳುಪಿದರು, ಅಜ್ಜಿ?” ಎಂದು. “ಊಟವಾದ ಮೇಲೆ ಆ ಹೊಲಸು ಕತೆಯನ್ನು ಹೇಳುತ್ತೇನೆ. ಮಿಂದು ಬಾ” ಎಂದು ಹೇಳಿ ಕಳುಹಿಸಿದಳು.
ಈ ಸಂದರ್ಭದಲ್ಲಿ ಶಬರಿಯ ಆರಾಧ್ಯಶಕ್ತಿ ಶ್ರೀರಾಮನ ಪಾತ್ರದ ವಿಷಯವಾಗಿ ಒಂದೆರಡು ಮಾತು ಅವಶ್ಯವೆಂದು ಕಾಣುತ್ತದೆ. ಶ್ರೀರಾಮ ಅವತಾರಪುರುಷ, ನಿಜ; ‘ಆ ಲೋಕದಿಂದ ವತರಿಸಿ ಬಂದು ಈ ಲೋಕಸಂಭವೆಯನೆಮ್ಮ ಭೂಜಾತೆಯಂ ಸೀತೆಯಂ’ವರಿಸಿದವನು. ‘ಆಕೆಯ ನೆವದಿ ಮೃಚ್ಛಕ್ತಿಯಂ ಮರ್ದಿಸುತೆ, ಸಂವರ್ಧಿ ಸಿರ್ಪವೋಲ್ ಚಿಚ್ಛಕ್ತಿಯಂ’, ನಿತ್ಯಸತ್ಯಕ್ಕೆ ಪ್ರತಿಮಾರೂಪನಾದವನು. ಅನ್ನಮಯ ಕೋಶದ ಬದ್ಧಜೀವಿಗಳನ್ನುದ್ಧರಿಸಲು ಪರಮಾತ್ಮನು ಅನ್ನಮಯಕೋಶಕ್ಕೆ ಇಳಿಯಬೇಕಾಗುತ್ತದೆ. ಕಡಿದಾದ ಬೆಟ್ಟತುದಿ ಯನ್ನೇರಿರುವ ತಂದೆ ಹತ್ತಲಾರದೆ ಬೆಟ್ಟದ ತಪ್ಪಲಿನಲ್ಲಿರುವ ಮಗುವನ್ನು ಕರೆತರಲು ಕೆಳಿಗಿಳಿಯುವಂತೆ, ಪರಮಾತ್ಮನಾದರೂ ಅನ್ನಮಯಕೋಶದ ಇತಿಮಿತಿಗಳನ್ನು ಸಂತೋಷ ದಿಂದ ಒಪ್ಪಿಕೊಂಡು, ಅನಂತರ ಮೆಟ್ಟಿಲು ಮೆಟ್ಟಲಾಗಿ ಪ್ರಾಣಮಯ ಮನೋಮಯ ವಿಜ್ಞಾನಮಯ ಕೋಶಗಳನ್ನು ದಾಟಿ ಕೊನೆಗೆ ಆನಂದಮಯ ಕೋಶವನ್ನು ಸೇರುವುದರ ಮೂಲಕ ಎಲ್ಲ ಜೀವಾತ್ಮಗಳೂ ತನ್ನ ಅಂಶ ಮಾತ್ರ, ಸಾಧನೆಯಿಂದ ಎಲ್ಲರೂ ಪರಮಸಿದ್ದಿ ಯನ್ನು ಪಡೆಯಬಹುದೆಂಬ ಸತ್ಯ ಪ್ರಕಟವಾಗುತ್ತದೆ. ಅವನು ಅನ್ನಮಯ ಕೋಶದಲ್ಲಿದ್ದರೂ ಅವನ ದೃಷ್ಟಿ ಮಾತ್ರ ಸರ್ವದಾ ಊರ್ಧ್ವಗಾಮಿ; ಸಾಮಾನ್ಯರ ಖಂಡದೃಷ್ಟಿಗೆ ಸಾಮಾನ್ಯನಂತೆ ಕಂಡುಬಂದರೂ ದ್ರಷ್ಟಾರರ ಪೂರ್ಣದೃಷ್ಟಿಗೆ ಅವನ ವಿರಾಟ್ ಮಹಿಮೆಯ ದರ್ಶನ ವಾಗುತ್ತದೆ.
ಶ್ರೀರಾಮನ ಜೀವನದಲ್ಲಿಯೂ ನಿಯತಿಬದ್ಧವಾದ ವಿಕಾಸನ ಕ್ರಮವನ್ನು ಕಾಣಬಹು ದಾಗಿದೆ. ಜನಮನಸ್ಸಿನ ನಿರಂತರ ನಿರೀಕ್ಷೆ ಅಭೀಪ್ಸೆಗಳೂ ದಶರಥ ಮಹಾರಾಜನ ತಪೋಮೂಲವಾದ ಬಯಕೆಯೂ ಜೊತೆಗೂಡಿ ವಿಶ್ವಶಕ್ತಿಯನ್ನು ಶ್ರೀರಾಮನ ರೂಪದಲ್ಲಿ ಎಳೆದು ತರುತ್ತವೆ. ಅವನ ಹುಟ್ಟು ಬೆಳವಣಿಗೆಗಳು ಸಾಮಾನ್ಯರ ಕಣ್ಣಿಗೆ – ಕೈಕೆ ಭರತ ಲಕ್ಷ್ಮಣ, ಕಡೆಗೆ ಸೀತೆ ಮೊದಲಾದವರ ಕಣ್ಣಿಗೆ – ಮೊದಮೊದಲು ಸಾಮಾನ್ಯವಾಗಿಯೆ ತೋರುತ್ತವೆ; ಆದರೆ ಅವುಗಳ ಮೂಲ ರಹಸ್ಯ ವಸಿಷ್ಠ ಜಾಬಾಲಿಗಳಿಗೆ, ಮಿಶ್ರಾಮಿತ್ರ ಭರದ್ವಾಜಾದಿ ಋಷಿಗಳಿಗೆ ಶಬರಿಯಂಥ ಭಕ್ತಶಿರೋಮಣಿಗೆ ಸುಸಂವೇದ್ಯ. ಹಸುಳೆ ರಾಮಚಂದ್ರನು ಗಗನದ ಚಂದ್ರನನ್ನು ಬಯಸುವ ರಹಸ್ಯ ದಶರಥನಿಗೆ ಗೊತ್ತೆ, ಕೌಸಲ್ಯೆಗೆ ಗೊತ್ತೆ? ಅಹಲ್ಯೋದ್ಧರಣದ ಮೂಲ ರಹಸ್ಯ ಕೈಕೆಗೆ ಅರಿವಾಗಿದ್ದರೆ ರಾಮನನ್ನು ಕಾಡಿಗಟ್ಟುತ್ತಿದ್ದಳೆ? ಲೋಕಕಲ್ಯಾಣಕ್ಕಾಗಿ, ಮೃಚ್ಛಕ್ತಿಯ ಮರ್ದನಕ್ಕಾಗಿ ಶಾಪಗ್ರಸ್ತರ ಶಾಪವಿಮೋಚನೆಗಾಗಿ ಶ್ರೀರಾಮನ ವನವಾಸ ಅನಿವಾರ್ಯ ನಿಜ. ಶ್ರೀರಾಮಶಕ್ತಿಯ ಸ್ವಯಂವಿಕಾಸನಕ್ಕೂ ಆತ್ಮಾನುಸಂಧಾನಕ್ಕೂ ತಪಸ್ಸು ಅವಶ್ಯಕವಾಗಿತ್ತು; ಏಕೆಂದರೆ ಅದು ಈ ಲೋಕನಿಯತಿಯ ವಿಕಾಸನ ವಿಧಾನ. ಸಹೃದಯನ ರಸಗ್ರಹಣ ಶಕ್ತಿಯಿಂದ ಕವಿಯ ಆತ್ಮ ಪ್ರಕಟವಾಗುವಂತೆ, ಭಕ್ತನ ಭಕ್ತಮಹಿಮೆಯಿಂದ ಆರಾಧ್ಯದೇವತೆಯ ಮಹಿಮೆ ಸುಪ್ರಕಟವಾಗುವಂತೆ, ಅಹಲ್ಯೋದ್ಧರಣ, ಅತ್ರಿ ಅಗಸ್ತ್ಯಾದಿ ಋಷಿಗಳ ದರ್ಶನದಿಂದ ವನವಾಸದ ತಪಸ್ಸಿನಿಂದ ಶ್ರೀರಾಮ ಸ್ವಯಂಪ್ರಜ್ಞನಾಗುತ್ತಾನೆ. ಆದರೆ ಶಬರಿಯ ಮತ್ತು ಪ್ರಾಣಪುತ್ರನ ದರ್ಶನ ದೊರೆಯುವ ತನಕ ಅವನು ಸಂಪೂರ್ಣವಾಗಿ ಸ್ವಯಂಪ್ರಜ್ಞ ನಾಗಿರುವುದಿಲ್ಲ. ತನ್ನ ನೈರಾಶ್ಯವೇ ಮೂರ್ತಿವೆತ್ತಂತಿದ್ದ ಕಬಂಧನ ಸಂಹಾರಾನಂತರ ಲಕ್ಷ್ಮಣನಿಗೆ ಶ್ರೀರಾಮ ಕೊಡುವ ‘ತಿಳಿದವಂ! ತಿಳಿದಮೇಲಲ್ತೆ?’ ಎಂಬ ಉತ್ತರದಿಂದ ಈ ಅಂಶ ವ್ಯಕ್ತವಾಗುತ್ತದೆ. ಶಬರಿ ತನ್ನ ದೀರ್ಘ ತಪಸ್ಸಿನ ಫಲವನ್ನೆಲ್ಲ ನಿವೇದಿಸಿದನಂತರ ಶ್ರೀರಾಮನ ನಿರಾಶೆ ಹರಿಯುತ್ತದೆ, ಸ್ವಯಂಪ್ರಜ್ಞೆ ಲಭಿಸಿ ಸಂತುಷ್ಟನಾಗುತ್ತಾನೆ. ಈ ದೃಷ್ಟಿಯಿಂದ ಲೀಲಾಭೂಮಿಕೆಯಲ್ಲಿ ಭಗವಂತ – ಭಕ್ತ ಇಬ್ಬರೂ ಪರಸ್ಪರ ಪೂರಕಶಕ್ತಿಗಳು; ರಾಮಶಬರಿಯರೆ ಇದಕ್ಕೆ ನಿದರ್ಶನ.
………ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ದಿಯೊಲ್?…..
ಭಗವಂತ ಭಕ್ತನಿಗೆ ಮೈದೋರುವ ಆಕಾರ ಪ್ರಕಾರ ವಿಧಾನಗಳು ಇಂಥವೇ ಎಂದು ಹೇಳಲಾಗುವುದಿಲ್ಲ. ಭಕ್ತ ನಿರೀಕ್ಷಿಸುವುದೊಂದಾದರೆ ಆತ ಪ್ರತ್ಯಕ್ಷನಾಗುವುದು ತದ್ವಿರುದ್ಧ ವಾದೊಂದು ರೀತಿಯಲ್ಲಿ. ಭಕ್ತನ ಅಹಂಕಾರವನ್ನು ಸಂಪೂರ್ಣವಾಗಿ ವಿನಾಶಗೈಯಲು ಅದು ಅತ್ಯಾವಶ್ಯಕವಾಗಬಹುದು. ತನ್ನಿಚ್ಛೆಯಂತೆ ತಾನು ರೂಪತಾಳುತ್ತಾನಾದರೂ, ಇಲ್ಲಿ ಅವನು ಶಬರಿಗೆ ಪ್ರತ್ಯಕ್ಷವಾಗಿರುವ ರೀತಿ ಲೋಕಸಾಮಾನ್ಯದ ದೃಷ್ಟಿಯಿಂದಲೂ ಅನಿವಾರ್ಯವೆಂದೇ ತೋರುತ್ತದೆ, ಸಹಜವೆಂದೇ ಕಾಣುತ್ತದೆ – ಪಾಪ! ಅವಳು ತನ್ನ ಕಲ್ಪನೆಯ ಶ್ರೀರಾಮಚಂದ್ರನನ್ನು ಕಾಣದೆ ನಿರಾಶಳಾದಳು. ಆದರೆ ಕಣ್ಣರಿಯದಿದ್ದರೂ ಎದೆಯರಿಯದೆ? ಮನಸ್ಸಿನಲ್ಲಿ ಏನೋ ಶಂಕೆ. ಅವರು ಸ್ನಾನಕ್ಕೆ ಹೋಗಿದ್ದಾಗ ಅವರ ಗಂಟನ್ನು ಮುಟ್ಟಿ ನೋಡುತ್ತಾಳೆ. ಏನೂ ಗೊತ್ತಾಗದು. ಮಿಂದು ಬಂದ ರಾಮಲಕ್ಷ್ಮಣರ ತೇಜಸ್ಸನ್ನು ನೋಡಿ ಕುತೂಹಲ ಎವೆಯಿಕ್ಕಿತು. ಯಾರೊ ದೊರೆಮಕ್ಕಳಿರಬಹುದೆಂದು ಕೊಂಡಳು.
ಅನಂತರ ಆರೋಗಣೆ ಆರಂಭವಾಯಿತು. ಆ ಬಡವಿ ಊಟ ಬಡಿಸಿದಳು. ಅದು ಬಡವಿಯ ಊಟವೇ? ಕೆನೆಹಾಲು, ಜೇನ್ತುಪ್ಪ; ನೂಲೆಗೆಣಸು, ಬಾಳೆಯಹಣ್ಣು, ಕಂದಮೂಲ, ಹಣ್ಣುಹಂಪಲು, ಸೌತೆಪಚ್ಚಡಿ, ಮಣಿಹೆಂಬೆ, ಹಚ್ಚನಕ್ಕಿಯ ಬೆಚ್ಚನನ್ನ, ಮೊಸರು, ಬೆಲ್ಲ, ಬೆಣ್ಣೆ – ಇಷ್ಟೇ ಅಲ್ಲ, ಜೊತೆಗೆ ಸವಿನುಡಿ, ಮುಗುಳುನಗೆ – ಇನ್ನೇನು ಬೇಕು? ಇವೆಲ್ಲವೂ ಅವಳ ತಪಃಫಲದ ಪ್ರತೀಕಗಳು. ಊಟದ ಜೊತೆಯಲ್ಲಿ ಸಂಭಾಷಣೆಯೂ ಸಾಗಿತು. ಶಬರಿ ತನ್ನೆಲ್ಲ ಸಂಕಟವನ್ನು ತೋಡಿಕೊಂಡಳು “ಹತ್ತು ವರ್ಷಗಳಿಂದ ರಾಮಸೀತೆಯರಿಗಾಗಿ ಕಾದಿದ್ದೇನೆ. ನಿತ್ಯವೂ ಈ ಉಣಿಸನ್ನೆ ಅಣಿ ಮಾಡುತ್ತಿದ್ದೇನೆ. ಗುರುವಾಣಿ ಸುಳ್ಳಾಗುವುದೆ? ನೀವು ಬಡಗರಂದದಿ ಕಾಣುತ್ತೀರಿ. ರಾಮನನ್ನು ಕಂಡಿದ್ದೀರ? ಕೇಳಿದ್ದೀರ? ಎಂದಿಗೆ ಬರುತ್ತಾನೆ?” ಮತ್ತೆ “ಶಾಂತಿನಿಧಿ ಯಾತನಂ ಕಾಣ್ಬುದೆ ಪರಮಶಾಂತಿ” ಎಂದಳು. ರಾಮ ಸಗದ್ಗದನಾಗಿ, “ಶಾಂತಿನಿಧಿ ಯಾತಂಗೆ ಶಾಂತಿಯಿಲ್ಲದೆ ತೊಳಲುತಿಹನಲ್ತೆ?……ಸಾಮಾನ್ಯನಂ ದೇವಮಾನ್ಯಂ ಗೆತ್ತುದಜ್ಜಿ ನಿನ್ನಳ್ಕರೂಹೆ” ಎಂದು ಉತ್ತರವಿತ್ತನು. “ತೆಗೆ ತೆಗೆ! ಮಹಾತ್ಮನಂ ತೆಗಳದಿರ್!” “ಬಲ್ಲೆನಾಂ ರಾಮನಂ!” “ನೀನರಿಯೆಯಾತನಂ” “ನಾನರಿಯೆನೇಂ? ನನ್ನನಾನರಿಯೆನೆಂದಾಡುತಿಹೆ!” ಈ ಸಂಭಾಷಣೆಯಿಂದ ಶಬರಿಯ ಇಷ್ಟದೇವತಾ ನಿಷ್ಠೆಯೂ, ಶ್ರೀರಾಮನ ಪ್ರಕ್ಷುಬ್ಧ ಚಿತ್ತಪರಿಸ್ಥಿತಿಯೂ ವ್ಯಕ್ತವಾಗುತ್ತವೆ. ಅವನಿನ್ನೂ ತಾನೆ ತಾನಾಗಿಲ್ಲವೆಂಬುದೂ ಗೊತ್ತಾಗುತ್ತದೆ. ಶ್ರೀರಾಮನ ಕೊನೆಯ ನುಡಿಯಿಂದ ಶಬರಿ ಬೆರಗು ಹೊಡೆದಂತಾದಳು; ರಾಮನನ್ನು ಮತ್ತೆ ಮತ್ತೆ ನೋಡಿದಳು. ಪಾಪ! ಕಣ್ಣಿಗೆ ಕಾಣುವುದೇನು? ಅದೇ ರೂಕ್ಷರೂಪ! ಅವನ ಮಾತಾದರೂ ಅರ್ಥವಾಯಿತೆ? ತರ್ಕವಿತರ್ಕವಾಗಲೀ ತತ್ವದ ಗಹನತೆಯಾಗಲೀ ಅವಳಿಗೆ ಅರ್ಥವಾಗುವುದಿಲ್ಲ. ಅವಳಿಗೆ ಗೊತ್ತಿದ್ದುದು ಅನನ್ಯಪ್ರೇಮ ವೊಂದೇ – ಅದೇ ಅವಳ ಬಾಳು, ಅದೇ ಅವಳ ತಪಸ್ಸು.
ಊಟವಾದ ಮೇಲೆ ಅವರಿಬ್ಬರೂ ವಿಶ್ರಾಂತಿಗಾಗಿ ಮಲಗಿದರು. ನಡುವೆ ಎಚ್ಚರವಾದಾಗ ಲಕ್ಷ್ಮಣ ಹೊರಗೆ ಹೋದನು. ರಾಮ “ಸೀತೆ, ಬಾ ಇಲ್ಲಿ; ಬಾ ಪ್ರಿಯೆ, ಜನಕಜಾತೆ!” ಎಂದು ಕನವರಿಸಿದನು. ಬಳಿಯಲ್ಲಿಯೆ ಅತಿಥಿಗಳಿಗಾಗಿ ಬೆಲ್ಲ ಬೇಲದ ಪಾನಕವನ್ನು ಅಣಿ ಮಾಡುತ್ತಿದ್ದ ಶಬರಜ್ಜಿ ಓಡಿಬಂದು ಅವನನ್ನೇ ಕಣ್ನಟ್ಟು ನೋಡಿದಳು. ಕ್ಷಣಕಾಲ-ಕ್ಷಣಕಾಲ ಮಾತ್ರ ಆ ದರಹಸಿತ ಮುಖದಲ್ಲಿ ತನ್ನ ಊಹೆಯ ಸೌಮ್ಯನನ್ನು ಕಂಡಳು. ಆದರೆ ಆ ಸೌಮ್ಯಸ್ಥಿತಿ ಬಹಳ ಕಾಲ ತಂಗಲಿಲ್ಲ. ಕೂಡಲೆ ಅದು ಮಾಯವಾಗಿ ಆ ಮುಖ ಮತ್ತೆ ರೌದ್ರಮುದ್ರಿತವಾಯಿತು. “ನಿಲ್, ರಾಕ್ಷಸಾಧಮ, ನಿಲ್! ಪೇಳೆಲ್ಲಿಗುಯ್ದಪಯ್ ನನ್ನ ಸೀತೆಯನೆಲವೊ ನೀಚ!” ಎಂದು ಕೂಗುತ್ತ, ನಿದ್ದೆಯಿಂದೆಚ್ಚತ್ತನು. ಪಕ್ಕದಲ್ಲಿ ಹೆದರಿ ನಿಂತಿದ್ದ ಶಬರಿಯನ್ನು ನೋಡಿ, “ತಪ್ಪಿದೆನಜ್ಜಿ. ಕಂಡ ಕನಸಂ ನನಸುಗೆತ್ತು, ಕೆಮ್ಮನೆ ನಿನ್ನನಂಜಿಸಿದೆ” ಎಂದನು. ತನ್ನ ಅತಿಥಿ ಯಾರೆಂಬುದರ ಬಗೆಗೆ ಆ ಮುದುಕಿಗೆ ಬೇರೆ ಸಾಕ್ಷಿಯೇಕೆ? ಒಡನೆಯೆ ಅವಳು ರಾಮನ ಮೇಲೆ ಬಿದ್ದು ಅಪ್ಪಿಕೊಂಡಳು. “ಓ ನನ್ನ ಕಂದಯ್ಯ, ರಾಮಚಂದ್ರಯ್ಯ, ದಮ್ಮಯ್ಯ, ನನ್ನ ಮಗಳಿಗೆ ಏನಾಯ್ತಯ್ಯ – ಅಯ್ಯೋ, ನಿನ್ನ ಗಂಟಿನಲ್ಲೊಂದು ಸೀರೆಯನ್ನು ಕಂಡೆ. ಆಗ ತಿಳಿಯದಾದೆ. ನನ್ನ ಮಗಳಿಗೆ ಏನಾಯ್ತು? ಸೀತೆಗೇನು ಕೇಡಾಯ್ತು” ಎಂದು ಹಲವರಿದಳು; ಬೇಡಿದಳು. “ನಾನು ನಿರ್ಭಾಗ್ಯ; ಸೀತೆಯನ್ನು ರಾಕ್ಷಸ ಕದ್ದೊಯ್ದ. ಅವಳನ್ನರಸಲು ಲಕ್ಷ್ಮಣನೊಡನೆ ಅಲೆಯುತ್ತಿದ್ದೇನೆ” ಎಂದು ದೈನ್ಯದಿಂದ ಬಿಕ್ಕಿ ಬಿಕ್ಕಿ ಅತ್ತನು. ಶಬರಿ ಮತ್ತೊಬ್ಬಳು ಕೌಸಲ್ಯೆಯಾದಳು; ಅವಳ ತೋಳ್ತೆಕ್ಕೆಯಲ್ಲಿ ರಾಮ ಮತ್ತೊಮ್ಮೆ ಶಿಶುವಾದನು; ವಾತ್ಸಲ್ಯದ ಕಂದನಾದನು.
ಪ್ರಪಂಚದಲ್ಲಿ ಮಾತೃವಾತ್ಸಲ್ಯದಂತಹ ನಿಷ್ಕಲ್ಮಷವಾದ, ಸ್ವಾರ್ಥರಹಿತವಾದ, ತ್ಯಾಗಪೂರ್ಣವಾದ ವಾತ್ಸಲ್ಯ ಬೇರೊಂದಿಲ್ಲ. ವಾತ್ಸಲ್ಯವೆಂದರೆ ಮಾತೃವಾತ್ಸಲ್ಯ. ಅದು ಭಗವಂತನ ವಾತ್ಸಲ್ಯಕ್ಕೆ ಹತ್ತಿರವಾದುದು. ಆತ್ಮಯಜ್ಞವೇ ಅದರ ಉಸಿರು. ಭಕ್ತ ವಾತ್ಸಲ್ಯದ ಚಂದ್ರಿಕೆಯಲ್ಲಿ ವಿರಾಡ್ರೂಪನಾದ ಭಗವಂತ ಚಂದ್ರೋಪಲದಂತೆ ಕರಗುತ್ತಾನೆ; ಕರಗಿ ಕಂದನಾಗುತ್ತಾನೆ. ಶ್ರೀರಾಮ ಶೋಕಭಾರದಿಂದ ದಿನೇ ದಿನೇ ಕೃಶನಾದನು. ಹಾಸುಗೆಯಿಂದ ಏಳಲಾರದಷ್ಟು ನಿಶ್ಶಕ್ತನಾದನು. ಶಬರಿ ಹಗಲಿರುಳೆನ್ನದೆ ನಿದ್ದೆಯುಳಿದು ಅವನಿಗೆ ಆರೈಕೆ ಮಾಡಿದಳು; ತನ್ನುಳಿದ ಆಯುವನ್ನು ‘ರಾಮಸೇವಾ ಸಾಧನೆಗೆ’ ಸಮೆಸಿದಳು.
ಆದರೂ ರಾಮನ ರುಜೆ ಇಳಿಮುಖವಾಗಿಲಿಲ್ಲ; ದಿನೇ ದಿನೇ ಅವನು ಕೃಶವಾಗ ತೊಡಗಿದನು. ಅಣ್ಣನ ದುಃಸ್ಥಿತಿಯನ್ನು ಕಂಡ ಲಕ್ಷ್ಮಣ ಚಿಂತಾಕ್ರಾಂತನಾದನು. ಒಂದಿರುಳು ಕತ್ತಲಲ್ಲಿ ಅರೆಬಂಡೆಯೊಂದರ ಮೇಲೆ ಕುಳಿತು ಸಪ್ತರ್ಷಿಮಂಡಲ ಮೇಲೇಳುವುದನ್ನೆ ನೋಡುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಬೆಂಗಡೆಯಿಂದ ಶಬರಿ ಬಂದು, “ಇದೇನ್, ಕಂದ, ಲಕ್ಷ್ಮಣ, ನೀನುಮಿಂತೇಕೆ ಪೇಳೆರ್ದೆಗೆಟ್ಟು ಕೊರಗುತಿಹೆ?” ಎಂದಳು. “ಅಜ್ಜಿ, ಅತ್ತಿಗೆಗಂತು ಪಾಡಾಯ್ತು. ಅಣ್ಣಂಗೆ…..” ಎನ್ನುತ್ತ ಮುಂದೆ ಮಾತುಬಾರದೆ ಸುಮ್ಮನೆ ರೋದಿಸ ತೊಡಗಿದನು. ಶಬರಿ ಅವನ ಕಣ್ಣನ್ನೊರಸಿ,
…….ಬಾ ಒಳಗೆ, ಬಿಡು ದುಃಖಮಂ,
ಸೌಮಿತ್ರಿ, ನಿನ್ನಣ್ಣನುಸಿರಿಗಾಂ ಹೊಣೆಗಾರ್ತಿ,
ನನ್ನ ಗುರುಕೃಪೆಯಿಂದ ರಾಮನ ರುಜೆಯನೆಲ್ಲಮಂ
ಹೀರಿ ಬಿಸುಡುವೆ, ನೋಡು ಬಾ!…..
ಎಂದು ಒಳಗೆ ಕರೆದೊಯ್ದಳು; ‘ತನ್ನ ಮೋಕ್ಷಕ್ಕೆ ತನ್ನ ದೇವತೆಯಂ ಪ್ರದಕ್ಷಿಣಾ ಪೂರ್ವಕಂ ಪ್ರಾರ್ಥಿಸುವಳೆಂಬಂತೆ’ ಮಲಗಿದ್ದ ಶ್ರೀರಾಮಮೂರ್ತಿಯನ್ನು ಬಲಗೊಂಡು, ಮಂತ್ರವನ್ನು ಪಠಿಸಿ ಕೈಮುಗಿದು ಕಾಲಿಗೆ ಅಡ್ಡಬಿದ್ದಳು. “ವತ್ಸ, ಇನ್ನು ದುಃಖ ಬೇಡ-ರಾಮ ಸುಕ್ಷೇಮಿ” ಎಂದು ಲಕ್ಷ್ಮಣನ ಕಡೆಗೆ ತಿರುಗಿ ಹೇಳಿದಳು. ಆ ಭಕ್ತೆ ತನ್ನನ್ನೂ ತನ್ನ ತಪಶ್ಶಕ್ತಿಯನ್ನೂ ನಿವೇದಿಸಿ ಶ್ರೀರಾಮನ ರುಜೆಯನ್ನು ಪರಿಹರಿಸಿದಳು. ಮಾರನೆಯ ದಿನ ರಾಮ ಸುದೃಢಕಾಯದ ಆರೋಗ್ಯದಿಂದ ಎದ್ದನು. ಶಬರಿ ಆ ದಿನವೆ ಹಾಸುಗೆ ಹಿಡಿದಳು. ಸೌಮಿತ್ರಿ ಕೃತಜ್ಞತಾಭಾರ ದಿಂದ ಅವಳ ಚರಣಲದಲ್ಲಿ ಕೆಡೆದನು.
ತನಗಾಗಿ ನಿದ್ದೆಗೆಟ್ಟು ದಣಿದು ಬೆಂಡಾದ ಶಬರಿಯನ್ನು ಶ್ರೀರಾಮ ಉಪಚರಿಸಲನು ವಾದನು. ಆ ಉಪಚಾರದ ಸಂಭ್ರಮದಲ್ಲಿ ಅವನ ದುಃಖವೂ ಮರೆಯಾಯಿತು. ಭಕ್ತನಿಗೆ ಇದಕ್ಕಿಂತ ಬೇರೆ ಪುಣ್ಯ ಮತ್ತೊಂದುಂಟೆ! ಆರಾಧ್ಯದೇವತೆಯ ಕೈಯಿಂದ ಸೇವಿಸಿಕೊಳ್ಳುವ ಆರಾಧಕನೇ ಧನ್ಯ! ಅಲ್ಲದೆ ಇಲ್ಲಿ ಆರಾಧ್ಯದೇವತೆ-ಆರಾಧಕರ ಭಿನ್ನತೆಯೂ ಮಾಯ ವಾಗುತ್ತದೆ. ಹಣ್ಣೆಲೆಗೆ ಉಪಚಾರವೇಕೆ, ಹಸುರೆಲೆಗೆ ಮಾತ್ರ ಬೇಕು ಎಂದು ಶಬರಿ ಶ್ರೀರಾಮನನ್ನು ಸಂತೈಸಿ
……..ಧನ್ಯೆಯಾಂ, ರಾಮಚಂದ್ರ, ನೀಂ
ಪ್ರೀತಿ ಪರಿಚರ್ಯೆಗೆಯ್ಯುತಿರಲಾಂ ಶಾಂತಿಯಿಂ
ಸೇರಿದಪೆನಧ್ಯಾತ್ಮಮಂ. ಮಿಗಿಲದಕೆ ಸಯ್ಪು ತಾಂ
ಬೇರೇನೊಳದೆ?….
ಎಂದು ತಾನು ಅಧ್ಯಾತ್ಮಾನಂದದಲ್ಲಿ ಮುಳುಗುತ್ತಾಳೆ. ರಾವಣನ ಉದ್ಯಾನದಲ್ಲಿ ಸೀತೆ ಸೊರಗುತ್ತಿರುವಂತೆ ಕನಸಾದುದಾಗಿ ತಿಳಿಸುತ್ತಾಳೆ – ಅದು ಕನಸಲ್ಲ, ನಿಜವಾಗಿ ‘ಕಣಸು’. ಭಕ್ತೆ ಭಗವಂತನಿಗೆ ಕಣ್ಣಾಗುತ್ತಾಳೆ, ಮುಂದಿನ ಮತಿಯಾಗುತ್ತಾಳೆ, ಗತಿಯಾಗುತ್ತಾಳೆ. ಸುಗ್ರೀವನ ಪರಿಚಯವನ್ನು ಹೇಳಿ, ಅವನ ಸಖ್ಯವನ್ನು ಪಡೆಯುವಂತೆ ಬೋಧಿಸಿ “ಗೆಲ್ಗೆ ದೈವೇಚ್ಛೆ; ನಿನ್ನಿಚ್ಛೆಯುಂ ಸಲ್ಗೆ!” ಎಂದು ಹರಸುತ್ತಾಳೆ.
ಶ್ರೀರಾಮಾಯಣ ದರ್ಶನದ ಶಬರಿಯ ಜೀವನಪರಾಭಕ್ತಿಗೊಂದು ಪ್ರತಿಮೆಯಾಗಿದೆ. ಆ ಭಕ್ತಿ ಇಲ್ಲಿ ವಾತ್ಸಲ್ಯದ ಸ್ವರೂಪವನ್ನು ತಾಳಿದೆ. ಇಲ್ಲಿಯ ಆರಾಧ್ಯದೇವತೆ ‘ವರವನ್ನು ಕೋ’ ಎಂದು ಬರುವುದಿಲ್ಲ. ‘ನಿನ್ನನ್ನೆ ಕೊಡು, ನಿನ್ನನ್ನೆ ಕೊಡು’ ಎಂದು ಬರುತ್ತಾನೆ. ಭಕ್ತೆಯು ಸಹ ತಾನು ಯಾರಿಗಾಗಿ ತಪಗೈದಿದ್ದಳೋ, ಯಾರ ನಾಮ ಬಲದಿಂದ ತಪಶ್ಶಕ್ತಿ ಯನ್ನಾರ್ಜಿಸಿದ್ದಳೋ ಆ ಮಹಾತ್ಮನಿಗೆ ತನ್ನೆಲ್ಲವನ್ನೂ-ತನ್ನ ಪ್ರಾಣಕ್ಕಿಂತ ಮಿಗಿಲಾದ ತಪಶ್ಯಕ್ತಿ ಯನ್ನೂ-ಸಮರ್ಪಿಸುತ್ತಾಳೆ. ಆ ಆತ್ಮಯಜ್ಞದಿಂದ ಭಕ್ತೆ ತಾನೂ ಸಂತುಷ್ಟಳಾಗಿ, ಲೋಕ ಲೀಲಾರ್ಥವಾಗಿ ಭಗವಂತನ ಸ್ವಪ್ರಜ್ಞೆಯನ್ನೂ ಕೆರಳಿಸಿ ಅವನನ್ನು ತೃಪ್ತಿಪಡಿಸುತ್ತಾಳೆ. ನಿರಾಶೆಯ ಅಂಧಕಾರದಲ್ಲಿ ತೊಳಲುತ್ತಿದ್ದ ತನ್ನ ಆರಾಧ್ಯಮೂರ್ತಿ ಶ್ರೀರಾಮಚಂದ್ರನನ್ನು ಆಸೆಯ ಬೆಳಕಿಗೊಯ್ದು ಉದ್ಧರಿಸುತ್ತಾಳೆ. ನಾರಾಯಣನನ್ನು ಕುರಿತ ನರನ ನಿರಂತರ ಅಭೀಪ್ಸೆ ಮತ್ತು ನಿರೀಕ್ಷೆಗಳಿಗೆ ಪ್ರತಿನಿಧಿ ಮತ್ತು ಪ್ರತಿಮೆ ಈ ಭಕ್ತಿಯೋಗಿನಿ ಶಬರಿ. ಆಕೆ ಶ್ರೀರಾಮನಿಗೆ ಸಮರ್ಪಿಸಲು ಕೂಡಿಡುವ ಹಣ್ಣುಹಂಪಲು ಬದುಕಿನ ಎಲ್ಲ ಸಾಧನೆಗೆ ಮತ್ತು ಕರ್ಮಫಲಕ್ಕೆ ಪ್ರತಿನಿಧಿಯಂತಿದೆ, ಪ್ರತಿಮೆಯಂತಿದೆ.
www.ಶಬರಿ ವೀಡಿಯೋ
ಶ್ರೀರಾಮನ ಜೀವನದಲ್ಲಿಯೂ ನಿಯತಿಬದ್ಧವಾದ ವಿಕಾಸನ ಕ್ರಮವನ್ನು ಕಾಣಬಹು ದಾಗಿದೆ. ಜನಮನಸ್ಸಿನ ನಿರಂತರ ನಿರೀಕ್ಷೆ ಅಭೀಪ್ಸೆಗಳೂ ದಶರಥ ಮಹಾರಾಜನ ತಪೋಮೂಲವಾದ ಬಯಕೆಯೂ ಜೊತೆಗೂಡಿ ವಿಶ್ವಶಕ್ತಿಯನ್ನು ಶ್ರೀರಾಮನ ರೂಪದಲ್ಲಿ ಎಳೆದು ತರುತ್ತವೆ. ಅವನ ಹುಟ್ಟು ಬೆಳವಣಿಗೆಗಳು ಸಾಮಾನ್ಯರ ಕಣ್ಣಿಗೆ – ಕೈಕೆ ಭರತ ಲಕ್ಷ್ಮಣ, ಕಡೆಗೆ ಸೀತೆ ಮೊದಲಾದವರ ಕಣ್ಣಿಗೆ – ಮೊದಮೊದಲು ಸಾಮಾನ್ಯವಾಗಿಯೆ ತೋರುತ್ತವೆ; ಆದರೆ ಅವುಗಳ ಮೂಲ ರಹಸ್ಯ ವಸಿಷ್ಠ ಜಾಬಾಲಿಗಳಿಗೆ, ಮಿಶ್ರಾಮಿತ್ರ ಭರದ್ವಾಜಾದಿ ಋಷಿಗಳಿಗೆ ಶಬರಿಯಂಥ ಭಕ್ತಶಿರೋಮಣಿಗೆ ಸುಸಂವೇದ್ಯ. ಹಸುಳೆ ರಾಮಚಂದ್ರನು ಗಗನದ ಚಂದ್ರನನ್ನು ಬಯಸುವ ರಹಸ್ಯ ದಶರಥನಿಗೆ ಗೊತ್ತೆ, ಕೌಸಲ್ಯೆಗೆ ಗೊತ್ತೆ? ಅಹಲ್ಯೋದ್ಧರಣದ ಮೂಲ ರಹಸ್ಯ ಕೈಕೆಗೆ ಅರಿವಾಗಿದ್ದರೆ ರಾಮನನ್ನು ಕಾಡಿಗಟ್ಟುತ್ತಿದ್ದಳೆ? ಲೋಕಕಲ್ಯಾಣಕ್ಕಾಗಿ, ಮೃಚ್ಛಕ್ತಿಯ ಮರ್ದನಕ್ಕಾಗಿ ಶಾಪಗ್ರಸ್ತರ ಶಾಪವಿಮೋಚನೆಗಾಗಿ ಶ್ರೀರಾಮನ ವನವಾಸ ಅನಿವಾರ್ಯ ನಿಜ. ಶ್ರೀರಾಮಶಕ್ತಿಯ ಸ್ವಯಂವಿಕಾಸನಕ್ಕೂ ಆತ್ಮಾನುಸಂಧಾನಕ್ಕೂ ತಪಸ್ಸು ಅವಶ್ಯಕವಾಗಿತ್ತು; ಏಕೆಂದರೆ ಅದು ಈ ಲೋಕನಿಯತಿಯ ವಿಕಾಸನ ವಿಧಾನ. ಸಹೃದಯನ ರಸಗ್ರಹಣ ಶಕ್ತಿಯಿಂದ ಕವಿಯ ಆತ್ಮ ಪ್ರಕಟವಾಗುವಂತೆ, ಭಕ್ತನ ಭಕ್ತಮಹಿಮೆಯಿಂದ ಆರಾಧ್ಯದೇವತೆಯ ಮಹಿಮೆ ಸುಪ್ರಕಟವಾಗುವಂತೆ, ಅಹಲ್ಯೋದ್ಧರಣ, ಅತ್ರಿ ಅಗಸ್ತ್ಯಾದಿ ಋಷಿಗಳ ದರ್ಶನದಿಂದ ವನವಾಸದ ತಪಸ್ಸಿನಿಂದ ಶ್ರೀರಾಮ ಸ್ವಯಂಪ್ರಜ್ಞನಾಗುತ್ತಾನೆ. ಆದರೆ ಶಬರಿಯ ಮತ್ತು ಪ್ರಾಣಪುತ್ರನ ದರ್ಶನ ದೊರೆಯುವ ತನಕ ಅವನು ಸಂಪೂರ್ಣವಾಗಿ ಸ್ವಯಂಪ್ರಜ್ಞ ನಾಗಿರುವುದಿಲ್ಲ. ತನ್ನ ನೈರಾಶ್ಯವೇ ಮೂರ್ತಿವೆತ್ತಂತಿದ್ದ ಕಬಂಧನ ಸಂಹಾರಾನಂತರ ಲಕ್ಷ್ಮಣನಿಗೆ ಶ್ರೀರಾಮ ಕೊಡುವ ‘ತಿಳಿದವಂ! ತಿಳಿದಮೇಲಲ್ತೆ?’ ಎಂಬ ಉತ್ತರದಿಂದ ಈ ಅಂಶ ವ್ಯಕ್ತವಾಗುತ್ತದೆ. ಶಬರಿ ತನ್ನ ದೀರ್ಘ ತಪಸ್ಸಿನ ಫಲವನ್ನೆಲ್ಲ ನಿವೇದಿಸಿದನಂತರ ಶ್ರೀರಾಮನ ನಿರಾಶೆ ಹರಿಯುತ್ತದೆ, ಸ್ವಯಂಪ್ರಜ್ಞೆ ಲಭಿಸಿ ಸಂತುಷ್ಟನಾಗುತ್ತಾನೆ. ಈ ದೃಷ್ಟಿಯಿಂದ ಲೀಲಾಭೂಮಿಕೆಯಲ್ಲಿ ಭಗವಂತ – ಭಕ್ತ ಇಬ್ಬರೂ ಪರಸ್ಪರ ಪೂರಕಶಕ್ತಿಗಳು; ರಾಮಶಬರಿಯರೆ ಇದಕ್ಕೆ ನಿದರ್ಶನ.
………ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ದಿಯೊಲ್?…..
ಭಗವಂತ ಭಕ್ತನಿಗೆ ಮೈದೋರುವ ಆಕಾರ ಪ್ರಕಾರ ವಿಧಾನಗಳು ಇಂಥವೇ ಎಂದು ಹೇಳಲಾಗುವುದಿಲ್ಲ. ಭಕ್ತ ನಿರೀಕ್ಷಿಸುವುದೊಂದಾದರೆ ಆತ ಪ್ರತ್ಯಕ್ಷನಾಗುವುದು ತದ್ವಿರುದ್ಧ ವಾದೊಂದು ರೀತಿಯಲ್ಲಿ. ಭಕ್ತನ ಅಹಂಕಾರವನ್ನು ಸಂಪೂರ್ಣವಾಗಿ ವಿನಾಶಗೈಯಲು ಅದು ಅತ್ಯಾವಶ್ಯಕವಾಗಬಹುದು. ತನ್ನಿಚ್ಛೆಯಂತೆ ತಾನು ರೂಪತಾಳುತ್ತಾನಾದರೂ, ಇಲ್ಲಿ ಅವನು ಶಬರಿಗೆ ಪ್ರತ್ಯಕ್ಷವಾಗಿರುವ ರೀತಿ ಲೋಕಸಾಮಾನ್ಯದ ದೃಷ್ಟಿಯಿಂದಲೂ ಅನಿವಾರ್ಯವೆಂದೇ ತೋರುತ್ತದೆ, ಸಹಜವೆಂದೇ ಕಾಣುತ್ತದೆ – ಪಾಪ! ಅವಳು ತನ್ನ ಕಲ್ಪನೆಯ ಶ್ರೀರಾಮಚಂದ್ರನನ್ನು ಕಾಣದೆ ನಿರಾಶಳಾದಳು. ಆದರೆ ಕಣ್ಣರಿಯದಿದ್ದರೂ ಎದೆಯರಿಯದೆ? ಮನಸ್ಸಿನಲ್ಲಿ ಏನೋ ಶಂಕೆ. ಅವರು ಸ್ನಾನಕ್ಕೆ ಹೋಗಿದ್ದಾಗ ಅವರ ಗಂಟನ್ನು ಮುಟ್ಟಿ ನೋಡುತ್ತಾಳೆ. ಏನೂ ಗೊತ್ತಾಗದು. ಮಿಂದು ಬಂದ ರಾಮಲಕ್ಷ್ಮಣರ ತೇಜಸ್ಸನ್ನು ನೋಡಿ ಕುತೂಹಲ ಎವೆಯಿಕ್ಕಿತು. ಯಾರೊ ದೊರೆಮಕ್ಕಳಿರಬಹುದೆಂದು ಕೊಂಡಳು.
ಅನಂತರ ಆರೋಗಣೆ ಆರಂಭವಾಯಿತು. ಆ ಬಡವಿ ಊಟ ಬಡಿಸಿದಳು. ಅದು ಬಡವಿಯ ಊಟವೇ? ಕೆನೆಹಾಲು, ಜೇನ್ತುಪ್ಪ; ನೂಲೆಗೆಣಸು, ಬಾಳೆಯಹಣ್ಣು, ಕಂದಮೂಲ, ಹಣ್ಣುಹಂಪಲು, ಸೌತೆಪಚ್ಚಡಿ, ಮಣಿಹೆಂಬೆ, ಹಚ್ಚನಕ್ಕಿಯ ಬೆಚ್ಚನನ್ನ, ಮೊಸರು, ಬೆಲ್ಲ, ಬೆಣ್ಣೆ – ಇಷ್ಟೇ ಅಲ್ಲ, ಜೊತೆಗೆ ಸವಿನುಡಿ, ಮುಗುಳುನಗೆ – ಇನ್ನೇನು ಬೇಕು? ಇವೆಲ್ಲವೂ ಅವಳ ತಪಃಫಲದ ಪ್ರತೀಕಗಳು. ಊಟದ ಜೊತೆಯಲ್ಲಿ ಸಂಭಾಷಣೆಯೂ ಸಾಗಿತು. ಶಬರಿ ತನ್ನೆಲ್ಲ ಸಂಕಟವನ್ನು ತೋಡಿಕೊಂಡಳು “ಹತ್ತು ವರ್ಷಗಳಿಂದ ರಾಮಸೀತೆಯರಿಗಾಗಿ ಕಾದಿದ್ದೇನೆ. ನಿತ್ಯವೂ ಈ ಉಣಿಸನ್ನೆ ಅಣಿ ಮಾಡುತ್ತಿದ್ದೇನೆ. ಗುರುವಾಣಿ ಸುಳ್ಳಾಗುವುದೆ? ನೀವು ಬಡಗರಂದದಿ ಕಾಣುತ್ತೀರಿ. ರಾಮನನ್ನು ಕಂಡಿದ್ದೀರ? ಕೇಳಿದ್ದೀರ? ಎಂದಿಗೆ ಬರುತ್ತಾನೆ?” ಮತ್ತೆ “ಶಾಂತಿನಿಧಿ ಯಾತನಂ ಕಾಣ್ಬುದೆ ಪರಮಶಾಂತಿ” ಎಂದಳು. ರಾಮ ಸಗದ್ಗದನಾಗಿ, “ಶಾಂತಿನಿಧಿ ಯಾತಂಗೆ ಶಾಂತಿಯಿಲ್ಲದೆ ತೊಳಲುತಿಹನಲ್ತೆ?……ಸಾಮಾನ್ಯನಂ ದೇವಮಾನ್ಯಂ ಗೆತ್ತುದಜ್ಜಿ ನಿನ್ನಳ್ಕರೂಹೆ” ಎಂದು ಉತ್ತರವಿತ್ತನು. “ತೆಗೆ ತೆಗೆ! ಮಹಾತ್ಮನಂ ತೆಗಳದಿರ್!” “ಬಲ್ಲೆನಾಂ ರಾಮನಂ!” “ನೀನರಿಯೆಯಾತನಂ” “ನಾನರಿಯೆನೇಂ? ನನ್ನನಾನರಿಯೆನೆಂದಾಡುತಿಹೆ!” ಈ ಸಂಭಾಷಣೆಯಿಂದ ಶಬರಿಯ ಇಷ್ಟದೇವತಾ ನಿಷ್ಠೆಯೂ, ಶ್ರೀರಾಮನ ಪ್ರಕ್ಷುಬ್ಧ ಚಿತ್ತಪರಿಸ್ಥಿತಿಯೂ ವ್ಯಕ್ತವಾಗುತ್ತವೆ. ಅವನಿನ್ನೂ ತಾನೆ ತಾನಾಗಿಲ್ಲವೆಂಬುದೂ ಗೊತ್ತಾಗುತ್ತದೆ. ಶ್ರೀರಾಮನ ಕೊನೆಯ ನುಡಿಯಿಂದ ಶಬರಿ ಬೆರಗು ಹೊಡೆದಂತಾದಳು; ರಾಮನನ್ನು ಮತ್ತೆ ಮತ್ತೆ ನೋಡಿದಳು. ಪಾಪ! ಕಣ್ಣಿಗೆ ಕಾಣುವುದೇನು? ಅದೇ ರೂಕ್ಷರೂಪ! ಅವನ ಮಾತಾದರೂ ಅರ್ಥವಾಯಿತೆ? ತರ್ಕವಿತರ್ಕವಾಗಲೀ ತತ್ವದ ಗಹನತೆಯಾಗಲೀ ಅವಳಿಗೆ ಅರ್ಥವಾಗುವುದಿಲ್ಲ. ಅವಳಿಗೆ ಗೊತ್ತಿದ್ದುದು ಅನನ್ಯಪ್ರೇಮ ವೊಂದೇ – ಅದೇ ಅವಳ ಬಾಳು, ಅದೇ ಅವಳ ತಪಸ್ಸು.
ಊಟವಾದ ಮೇಲೆ ಅವರಿಬ್ಬರೂ ವಿಶ್ರಾಂತಿಗಾಗಿ ಮಲಗಿದರು. ನಡುವೆ ಎಚ್ಚರವಾದಾಗ ಲಕ್ಷ್ಮಣ ಹೊರಗೆ ಹೋದನು. ರಾಮ “ಸೀತೆ, ಬಾ ಇಲ್ಲಿ; ಬಾ ಪ್ರಿಯೆ, ಜನಕಜಾತೆ!” ಎಂದು ಕನವರಿಸಿದನು. ಬಳಿಯಲ್ಲಿಯೆ ಅತಿಥಿಗಳಿಗಾಗಿ ಬೆಲ್ಲ ಬೇಲದ ಪಾನಕವನ್ನು ಅಣಿ ಮಾಡುತ್ತಿದ್ದ ಶಬರಜ್ಜಿ ಓಡಿಬಂದು ಅವನನ್ನೇ ಕಣ್ನಟ್ಟು ನೋಡಿದಳು. ಕ್ಷಣಕಾಲ-ಕ್ಷಣಕಾಲ ಮಾತ್ರ ಆ ದರಹಸಿತ ಮುಖದಲ್ಲಿ ತನ್ನ ಊಹೆಯ ಸೌಮ್ಯನನ್ನು ಕಂಡಳು. ಆದರೆ ಆ ಸೌಮ್ಯಸ್ಥಿತಿ ಬಹಳ ಕಾಲ ತಂಗಲಿಲ್ಲ. ಕೂಡಲೆ ಅದು ಮಾಯವಾಗಿ ಆ ಮುಖ ಮತ್ತೆ ರೌದ್ರಮುದ್ರಿತವಾಯಿತು. “ನಿಲ್, ರಾಕ್ಷಸಾಧಮ, ನಿಲ್! ಪೇಳೆಲ್ಲಿಗುಯ್ದಪಯ್ ನನ್ನ ಸೀತೆಯನೆಲವೊ ನೀಚ!” ಎಂದು ಕೂಗುತ್ತ, ನಿದ್ದೆಯಿಂದೆಚ್ಚತ್ತನು. ಪಕ್ಕದಲ್ಲಿ ಹೆದರಿ ನಿಂತಿದ್ದ ಶಬರಿಯನ್ನು ನೋಡಿ, “ತಪ್ಪಿದೆನಜ್ಜಿ. ಕಂಡ ಕನಸಂ ನನಸುಗೆತ್ತು, ಕೆಮ್ಮನೆ ನಿನ್ನನಂಜಿಸಿದೆ” ಎಂದನು. ತನ್ನ ಅತಿಥಿ ಯಾರೆಂಬುದರ ಬಗೆಗೆ ಆ ಮುದುಕಿಗೆ ಬೇರೆ ಸಾಕ್ಷಿಯೇಕೆ? ಒಡನೆಯೆ ಅವಳು ರಾಮನ ಮೇಲೆ ಬಿದ್ದು ಅಪ್ಪಿಕೊಂಡಳು. “ಓ ನನ್ನ ಕಂದಯ್ಯ, ರಾಮಚಂದ್ರಯ್ಯ, ದಮ್ಮಯ್ಯ, ನನ್ನ ಮಗಳಿಗೆ ಏನಾಯ್ತಯ್ಯ – ಅಯ್ಯೋ, ನಿನ್ನ ಗಂಟಿನಲ್ಲೊಂದು ಸೀರೆಯನ್ನು ಕಂಡೆ. ಆಗ ತಿಳಿಯದಾದೆ. ನನ್ನ ಮಗಳಿಗೆ ಏನಾಯ್ತು? ಸೀತೆಗೇನು ಕೇಡಾಯ್ತು” ಎಂದು ಹಲವರಿದಳು; ಬೇಡಿದಳು. “ನಾನು ನಿರ್ಭಾಗ್ಯ; ಸೀತೆಯನ್ನು ರಾಕ್ಷಸ ಕದ್ದೊಯ್ದ. ಅವಳನ್ನರಸಲು ಲಕ್ಷ್ಮಣನೊಡನೆ ಅಲೆಯುತ್ತಿದ್ದೇನೆ” ಎಂದು ದೈನ್ಯದಿಂದ ಬಿಕ್ಕಿ ಬಿಕ್ಕಿ ಅತ್ತನು. ಶಬರಿ ಮತ್ತೊಬ್ಬಳು ಕೌಸಲ್ಯೆಯಾದಳು; ಅವಳ ತೋಳ್ತೆಕ್ಕೆಯಲ್ಲಿ ರಾಮ ಮತ್ತೊಮ್ಮೆ ಶಿಶುವಾದನು; ವಾತ್ಸಲ್ಯದ ಕಂದನಾದನು.
ಪ್ರಪಂಚದಲ್ಲಿ ಮಾತೃವಾತ್ಸಲ್ಯದಂತಹ ನಿಷ್ಕಲ್ಮಷವಾದ, ಸ್ವಾರ್ಥರಹಿತವಾದ, ತ್ಯಾಗಪೂರ್ಣವಾದ ವಾತ್ಸಲ್ಯ ಬೇರೊಂದಿಲ್ಲ. ವಾತ್ಸಲ್ಯವೆಂದರೆ ಮಾತೃವಾತ್ಸಲ್ಯ. ಅದು ಭಗವಂತನ ವಾತ್ಸಲ್ಯಕ್ಕೆ ಹತ್ತಿರವಾದುದು. ಆತ್ಮಯಜ್ಞವೇ ಅದರ ಉಸಿರು. ಭಕ್ತ ವಾತ್ಸಲ್ಯದ ಚಂದ್ರಿಕೆಯಲ್ಲಿ ವಿರಾಡ್ರೂಪನಾದ ಭಗವಂತ ಚಂದ್ರೋಪಲದಂತೆ ಕರಗುತ್ತಾನೆ; ಕರಗಿ ಕಂದನಾಗುತ್ತಾನೆ. ಶ್ರೀರಾಮ ಶೋಕಭಾರದಿಂದ ದಿನೇ ದಿನೇ ಕೃಶನಾದನು. ಹಾಸುಗೆಯಿಂದ ಏಳಲಾರದಷ್ಟು ನಿಶ್ಶಕ್ತನಾದನು. ಶಬರಿ ಹಗಲಿರುಳೆನ್ನದೆ ನಿದ್ದೆಯುಳಿದು ಅವನಿಗೆ ಆರೈಕೆ ಮಾಡಿದಳು; ತನ್ನುಳಿದ ಆಯುವನ್ನು ‘ರಾಮಸೇವಾ ಸಾಧನೆಗೆ’ ಸಮೆಸಿದಳು.
ಆದರೂ ರಾಮನ ರುಜೆ ಇಳಿಮುಖವಾಗಿಲಿಲ್ಲ; ದಿನೇ ದಿನೇ ಅವನು ಕೃಶವಾಗ ತೊಡಗಿದನು. ಅಣ್ಣನ ದುಃಸ್ಥಿತಿಯನ್ನು ಕಂಡ ಲಕ್ಷ್ಮಣ ಚಿಂತಾಕ್ರಾಂತನಾದನು. ಒಂದಿರುಳು ಕತ್ತಲಲ್ಲಿ ಅರೆಬಂಡೆಯೊಂದರ ಮೇಲೆ ಕುಳಿತು ಸಪ್ತರ್ಷಿಮಂಡಲ ಮೇಲೇಳುವುದನ್ನೆ ನೋಡುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಬೆಂಗಡೆಯಿಂದ ಶಬರಿ ಬಂದು, “ಇದೇನ್, ಕಂದ, ಲಕ್ಷ್ಮಣ, ನೀನುಮಿಂತೇಕೆ ಪೇಳೆರ್ದೆಗೆಟ್ಟು ಕೊರಗುತಿಹೆ?” ಎಂದಳು. “ಅಜ್ಜಿ, ಅತ್ತಿಗೆಗಂತು ಪಾಡಾಯ್ತು. ಅಣ್ಣಂಗೆ…..” ಎನ್ನುತ್ತ ಮುಂದೆ ಮಾತುಬಾರದೆ ಸುಮ್ಮನೆ ರೋದಿಸ ತೊಡಗಿದನು. ಶಬರಿ ಅವನ ಕಣ್ಣನ್ನೊರಸಿ,
…….ಬಾ ಒಳಗೆ, ಬಿಡು ದುಃಖಮಂ,
ಸೌಮಿತ್ರಿ, ನಿನ್ನಣ್ಣನುಸಿರಿಗಾಂ ಹೊಣೆಗಾರ್ತಿ,
ನನ್ನ ಗುರುಕೃಪೆಯಿಂದ ರಾಮನ ರುಜೆಯನೆಲ್ಲಮಂ
ಹೀರಿ ಬಿಸುಡುವೆ, ನೋಡು ಬಾ!…..
ಎಂದು ಒಳಗೆ ಕರೆದೊಯ್ದಳು; ‘ತನ್ನ ಮೋಕ್ಷಕ್ಕೆ ತನ್ನ ದೇವತೆಯಂ ಪ್ರದಕ್ಷಿಣಾ ಪೂರ್ವಕಂ ಪ್ರಾರ್ಥಿಸುವಳೆಂಬಂತೆ’ ಮಲಗಿದ್ದ ಶ್ರೀರಾಮಮೂರ್ತಿಯನ್ನು ಬಲಗೊಂಡು, ಮಂತ್ರವನ್ನು ಪಠಿಸಿ ಕೈಮುಗಿದು ಕಾಲಿಗೆ ಅಡ್ಡಬಿದ್ದಳು. “ವತ್ಸ, ಇನ್ನು ದುಃಖ ಬೇಡ-ರಾಮ ಸುಕ್ಷೇಮಿ” ಎಂದು ಲಕ್ಷ್ಮಣನ ಕಡೆಗೆ ತಿರುಗಿ ಹೇಳಿದಳು. ಆ ಭಕ್ತೆ ತನ್ನನ್ನೂ ತನ್ನ ತಪಶ್ಶಕ್ತಿಯನ್ನೂ ನಿವೇದಿಸಿ ಶ್ರೀರಾಮನ ರುಜೆಯನ್ನು ಪರಿಹರಿಸಿದಳು. ಮಾರನೆಯ ದಿನ ರಾಮ ಸುದೃಢಕಾಯದ ಆರೋಗ್ಯದಿಂದ ಎದ್ದನು. ಶಬರಿ ಆ ದಿನವೆ ಹಾಸುಗೆ ಹಿಡಿದಳು. ಸೌಮಿತ್ರಿ ಕೃತಜ್ಞತಾಭಾರ ದಿಂದ ಅವಳ ಚರಣಲದಲ್ಲಿ ಕೆಡೆದನು.
ತನಗಾಗಿ ನಿದ್ದೆಗೆಟ್ಟು ದಣಿದು ಬೆಂಡಾದ ಶಬರಿಯನ್ನು ಶ್ರೀರಾಮ ಉಪಚರಿಸಲನು ವಾದನು. ಆ ಉಪಚಾರದ ಸಂಭ್ರಮದಲ್ಲಿ ಅವನ ದುಃಖವೂ ಮರೆಯಾಯಿತು. ಭಕ್ತನಿಗೆ ಇದಕ್ಕಿಂತ ಬೇರೆ ಪುಣ್ಯ ಮತ್ತೊಂದುಂಟೆ! ಆರಾಧ್ಯದೇವತೆಯ ಕೈಯಿಂದ ಸೇವಿಸಿಕೊಳ್ಳುವ ಆರಾಧಕನೇ ಧನ್ಯ! ಅಲ್ಲದೆ ಇಲ್ಲಿ ಆರಾಧ್ಯದೇವತೆ-ಆರಾಧಕರ ಭಿನ್ನತೆಯೂ ಮಾಯ ವಾಗುತ್ತದೆ. ಹಣ್ಣೆಲೆಗೆ ಉಪಚಾರವೇಕೆ, ಹಸುರೆಲೆಗೆ ಮಾತ್ರ ಬೇಕು ಎಂದು ಶಬರಿ ಶ್ರೀರಾಮನನ್ನು ಸಂತೈಸಿ
……..ಧನ್ಯೆಯಾಂ, ರಾಮಚಂದ್ರ, ನೀಂ
ಪ್ರೀತಿ ಪರಿಚರ್ಯೆಗೆಯ್ಯುತಿರಲಾಂ ಶಾಂತಿಯಿಂ
ಸೇರಿದಪೆನಧ್ಯಾತ್ಮಮಂ. ಮಿಗಿಲದಕೆ ಸಯ್ಪು ತಾಂ
ಬೇರೇನೊಳದೆ?….
ಎಂದು ತಾನು ಅಧ್ಯಾತ್ಮಾನಂದದಲ್ಲಿ ಮುಳುಗುತ್ತಾಳೆ. ರಾವಣನ ಉದ್ಯಾನದಲ್ಲಿ ಸೀತೆ ಸೊರಗುತ್ತಿರುವಂತೆ ಕನಸಾದುದಾಗಿ ತಿಳಿಸುತ್ತಾಳೆ – ಅದು ಕನಸಲ್ಲ, ನಿಜವಾಗಿ ‘ಕಣಸು’. ಭಕ್ತೆ ಭಗವಂತನಿಗೆ ಕಣ್ಣಾಗುತ್ತಾಳೆ, ಮುಂದಿನ ಮತಿಯಾಗುತ್ತಾಳೆ, ಗತಿಯಾಗುತ್ತಾಳೆ. ಸುಗ್ರೀವನ ಪರಿಚಯವನ್ನು ಹೇಳಿ, ಅವನ ಸಖ್ಯವನ್ನು ಪಡೆಯುವಂತೆ ಬೋಧಿಸಿ “ಗೆಲ್ಗೆ ದೈವೇಚ್ಛೆ; ನಿನ್ನಿಚ್ಛೆಯುಂ ಸಲ್ಗೆ!” ಎಂದು ಹರಸುತ್ತಾಳೆ.
ಶ್ರೀರಾಮಾಯಣ ದರ್ಶನದ ಶಬರಿಯ ಜೀವನಪರಾಭಕ್ತಿಗೊಂದು ಪ್ರತಿಮೆಯಾಗಿದೆ. ಆ ಭಕ್ತಿ ಇಲ್ಲಿ ವಾತ್ಸಲ್ಯದ ಸ್ವರೂಪವನ್ನು ತಾಳಿದೆ. ಇಲ್ಲಿಯ ಆರಾಧ್ಯದೇವತೆ ‘ವರವನ್ನು ಕೋ’ ಎಂದು ಬರುವುದಿಲ್ಲ. ‘ನಿನ್ನನ್ನೆ ಕೊಡು, ನಿನ್ನನ್ನೆ ಕೊಡು’ ಎಂದು ಬರುತ್ತಾನೆ. ಭಕ್ತೆಯು ಸಹ ತಾನು ಯಾರಿಗಾಗಿ ತಪಗೈದಿದ್ದಳೋ, ಯಾರ ನಾಮ ಬಲದಿಂದ ತಪಶ್ಶಕ್ತಿ ಯನ್ನಾರ್ಜಿಸಿದ್ದಳೋ ಆ ಮಹಾತ್ಮನಿಗೆ ತನ್ನೆಲ್ಲವನ್ನೂ-ತನ್ನ ಪ್ರಾಣಕ್ಕಿಂತ ಮಿಗಿಲಾದ ತಪಶ್ಯಕ್ತಿ ಯನ್ನೂ-ಸಮರ್ಪಿಸುತ್ತಾಳೆ. ಆ ಆತ್ಮಯಜ್ಞದಿಂದ ಭಕ್ತೆ ತಾನೂ ಸಂತುಷ್ಟಳಾಗಿ, ಲೋಕ ಲೀಲಾರ್ಥವಾಗಿ ಭಗವಂತನ ಸ್ವಪ್ರಜ್ಞೆಯನ್ನೂ ಕೆರಳಿಸಿ ಅವನನ್ನು ತೃಪ್ತಿಪಡಿಸುತ್ತಾಳೆ. ನಿರಾಶೆಯ ಅಂಧಕಾರದಲ್ಲಿ ತೊಳಲುತ್ತಿದ್ದ ತನ್ನ ಆರಾಧ್ಯಮೂರ್ತಿ ಶ್ರೀರಾಮಚಂದ್ರನನ್ನು ಆಸೆಯ ಬೆಳಕಿಗೊಯ್ದು ಉದ್ಧರಿಸುತ್ತಾಳೆ. ನಾರಾಯಣನನ್ನು ಕುರಿತ ನರನ ನಿರಂತರ ಅಭೀಪ್ಸೆ ಮತ್ತು ನಿರೀಕ್ಷೆಗಳಿಗೆ ಪ್ರತಿನಿಧಿ ಮತ್ತು ಪ್ರತಿಮೆ ಈ ಭಕ್ತಿಯೋಗಿನಿ ಶಬರಿ. ಆಕೆ ಶ್ರೀರಾಮನಿಗೆ ಸಮರ್ಪಿಸಲು ಕೂಡಿಡುವ ಹಣ್ಣುಹಂಪಲು ಬದುಕಿನ ಎಲ್ಲ ಸಾಧನೆಗೆ ಮತ್ತು ಕರ್ಮಫಲಕ್ಕೆ ಪ್ರತಿನಿಧಿಯಂತಿದೆ, ಪ್ರತಿಮೆಯಂತಿದೆ.
www.ಶಬರಿ ವೀಡಿಯೋ