ಪೀಠಿಕೆ : ಆಧುನಿಕ ವಿಜ್ಞಾನದ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಸಹ ಒಂದಾಗಿದೆ. ಕಂಪ್ಯೂಟರ್ ಇಂದು ಜಗತ್ತಿಗೆ ಒಂದು ವರವಾಗಿದೆ ಎಂದೇ ಹೇಳಬಹುದು. ಇಂದಿನ ದಿನಗಳಲ್ಲಿ ಯಾವುದೇ ಕಛೇರಿಗಳಿಗೆ ಹೋದರು ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದನ್ನು ನೋಡಬಹುದು. ಎಲ್ಲಾ ಕಡತಗಳನ್ನು ಕೂಡ ಗಣಕೀಕರಣ ಮಾಡಲಾಗುತ್ತಿದೆ. ಯಾವುದೇ ಉದ್ಯೋಗ ಹುಡುಕಿಕೊಂಡು ಹೋದರೂ ಕಂಪ್ಯೂಟರ್ ಶಿಕ್ಷಣವನ್ನು ಬಯಸುತ್ತಾರೆ. ಆದ್ದರಿಂದ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ.
ವಿಷಯ ವಿವರಣೆ : ಕಂಪ್ಯೂಟರ್ ತಂತ್ರಜ್ಞಾನದ ಶಿಕ್ಷಣ ಎಲ್ಲರಿಗೂ ಬೇಕಾಗಿದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್ಗಳ ಬಳಕೆ ಶಿಕ್ಷಣ ಕ್ಷೇತ್ರದಿಂದ ಹಿಡಿದು ಬ್ಯಾಂಕಿಂಗ್, ವೈಜ್ಞಾನಿಕ ಸಂಶೋಧನೆ, ಹಣಕಾಸು ವ್ಯವಹಾರ, ಕೃತಕ ಉಪಗ್ರಹದ ಉಡಾವಣೆ ಮತ್ತು ನಿರ್ವಹಣೆಯವರೆಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದ್ದರಿಂದ ಕಂಪ್ಯೂಟರ್ ಶಿಕ್ಷಣವನ್ನು ಶಿಕ್ಷಣವನ್ನು ಪ್ರತಿಯೊಬ್ಬರು ಪಡೆಯಲೇಬೇಕಾಗಿದೆ. ನಮ್ಮ ಸರ್ಕಾರಗಳು ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ.ಅದರಂತೆ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಂದು ನಾವು ಯಾವುದೇ ಕಚೇರಿ, ಬಸ್ಸು ನಿಲ್ದಾಣ, ರೈಲ್ವೆ ಸ್ಟೇಷನ್ಗೆ ಹೋದರೂ ಕಂಪ್ಯೂಟರ್ ಸ್ಥಾಪಿಸಿರುವುದು ಕಂಡು ಬರುತ್ತದೆ. ಹಿಂದೆ ಓದು ಬರಹ ಬಾರದ ವ್ಯಕ್ತಿ ಮಾತ್ರ ಅನಕ್ಷರಸ್ಥನಾಗಿರುತ್ತಿದ್ದನು. ಇಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಗೊತ್ತಿಲ್ಲದವರೂ ಅನಕ್ಷರರೇ ಆದಂತೆ ಆಗಿದೆ. ಆದ್ದರಿಂದ ಇಂದು ಇತರ ಶೈಕ್ಷಣಿಕ ವಿಷಯದಂತೆ ಕಂಪ್ಯೂಟರ್ ಶಿಕ್ಷಣವೂ ಅತಿ ಅಗತ್ಯ ವಿಷಯವಾಗಿದೆ. ಕಂಪ್ಯೂಟರ್ ಶಿಕ್ಷಣ ಹೊಂದಿದವರು ಸ್ವಉದ್ಯೋಗಗಳನ್ನು ಪ್ರಾರಂಭಿಸಬಹುದಾಗಿದೆ. ಡಿ.ಟಿ.ಪಿ. ಇಂಟರ್ನೆಟ್ ಬ್ರೌಸಿಂಗ್ ಸೆಂಟರ್,ಕಂಪ್ಯೂಟರ್ ಗೇಮ್ ಸೆಂಟರ್ ಫ್ಯಾಕ್ಸ್, ಡಾಟಾ ಎಂಟ್ರಿ ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಸಂಪಾದನೆ ಮಾಡಬಹುದಾಗಿದೆ. ಇನ್ನೂ ಹೆಚ್ಚಿನ ಕಂಪ್ಯೂಟರ್ ಶಿಕ್ಷಣ ಪಡೆದವರು ಅನೇಕ ಖಾಸಗಿ ಕಚೇರಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅವರು ಕೂಡ ಕಂಪ್ಯೂಟರ್ ಶಿಕ್ಷಣ ಕೇಂದ್ರಗಳನ್ನು ತೆರೆದು ಇತರರಿಗೆ ಶಿಕ್ಷಣವನ್ನು ನೀಡಬಹುದಾಗಿದೆ. ಉಪಸಂಹಾರ: ಒಟ್ಟಿನಲ್ಲಿ ಇಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣವೂ ಒಂದು ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹಾಗಾಗಿ ಪ್ರತಿಯೊಬ್ಬರು ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಆಧುನಿಕ ಜಗತ್ತಿಗೆ ಕಾಲಿಡಬೇಕಾಗಿದೆ. ಕಂಪ್ಯೂಟರ್ ಶಿಕ್ಷಣ ಪಡೆದು ಸ್ವಉದ್ಯೋಗಳನ್ನು ಮಾಡುವುದರಿಂದ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪ ದೂರಮಾಡಬಹುದಾಗಿದೆ ಎಂದು ಹೇಳಬಯಸುತ್ತೇನೆ.
1 Comment
ಪೀಠಿಕೆ : ರೈತ ದೇಶದ ಬೆನ್ನೆಲುಬು. ಅವನಿಲ್ಲದೆ ಯಾರೊಬ್ಬರಿಗೂ ಅನ್ನವಿಲ್ಲ. ಅವನ ದುಡಿಮೆಯೇ ನಮಗೆ ಸಹಕಾರ. ಇಂತಹ ರೈತನ ಬಾಳು ಇಂದಿನ ಕಾಲದಲ್ಲಿ ಗೋಳಾಗಿದೆ. ಇದರಿಂದ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಅವರಲ್ಲಿ ಧೈರ್ಯವನ್ನು ತುಂಬುವಂತ ಕೆಲಸ ಮಾಡಬೇಕು. ಇಲ್ಲವಾದರೆ ನಮ್ಮ ಅನ್ನಕ್ಕೆ ಕುತ್ತು ಬಂದು ಅವರ ದಾರಿಯನ್ನು ನಾವು ಹಿಡಿಬೇಕಾದಿತು.
ವಿಷಯ ವಿವರಣೆ : ದೇಶದ ಗಡಿಯನ್ನು ರಕ್ಷಿಸುವವನು ಯೋಧ. ಹಾಗೆಯೇ ದೇಶಕ್ಕೆ ಅನ್ನವನ್ನು ನೀಡುವವನು ರೈತ. ಇವರಿಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ, ಅವರಿಂದಲೇ ನಾವು ಇಂದು ದೇಶದೊಳಗೆ ಸುಖ, ಸಂತೋಷದಿಂದ ಬಾಳುತಿದ್ದೇವೆ. ಇಂತಹ ರೈತನ ಇಂದಿನ ಜೀವನ ಬಹಳ ದುಸ್ತರವಾಗಿಬಿಟ್ಟಿದೆ. ರೈತರಿಗೆ ಅವಶ್ಯವಾದ ಮಳೆ ಸರಿಯಾದ ಸಮಯಕ್ಕೆ ಬಾರದೆ ಗೋಳಾಡಿಸುತ್ತಿದೆ. ಇನ್ನೊಂದು ಕಡೆ ಬಿತ್ತಲು ಬೀಜ, ಗೊಬ್ಬರವಿಲ್ಲದೆ ಪರದಾಟ, ಮತ್ತೊಂದೆಡೆ ಇದಕ್ಕೋಸ್ಕರ ಸಾಲಮಾಡಿ ತೀರಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮತ್ತೊಂದು ಸಲ ಮಳೆಬಂದರು ಸರಿಯಾದ ಬೆಳೆ ಬರುವುದಿಲ್ಲ, ಬೆಳೆ ಇದ್ದರೂ ಅದಕ್ಕೆ ಸರಿಯಾದ ಬೆಲೆ ದೊರೆಯದೆ ಇರುವುದು. ಮತ್ತೊಂದೆಡೆ ಬೆಳೆಗಳು ಕೀಟಬಾದೆಯಿಂದ ನಾಶವಾಗುವುದು. ಒಂದು ಸಲ ಬರಗಾಲ, ಇನ್ನೊಂದು ಸಲ ಪ್ರವಾಹ ಇದರಿಂದ ಬೆಳೆಗಳಿಲ್ಲದೆ ಅನ್ನಕ್ಕೆ ಕುತ್ತು ಬಂದಿದೆ. ಹೀಗೆ ನಾನಾ ಕಾರಣಗಳಿಂದ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ರೈತರಿಗೆ ಮೊದಲು ನಾವು ದೈರ್ಯತುಂಬಬೇಕು. ಸಹಾಯ, ಸಹಕಾರ ನೀಡಬೇಕು. ಸ್ಥಾಪಿತ ಸರ್ಕಾರಗಳು ರೈತರಿಗೆ ಅವಶ್ಯವಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಬೆಳೆವಿಮೆಯನ್ನು ಸರಿಯಾದ ರೀತಿಯಲ್ಲಿ ಹಂಚಬೇಕು. ಸಾಲವಸೂಲಾತಿಯನ್ನು ಮುಂದೂಡಬೇಕು.ರೈತರಿಗೆ ಅವಶ್ಯವಾದ ಬೀಜಗೊಬ್ಬರ, ಔಷಧ, ಕೃಷಿಸಂಬಂಧಿತ ಸಲಕರಣೆಗಳನ್ನು ಯೋಗ್ಯಬೆಲೆಯಲ್ಲಿ ಸಿಗುವಂತೆ ಮಾಡಬೇಕು.ಬೆಳೆಗಳಿಗೆ ಸರಿಯಾದ ಮಾರುಕಟ್ಟೆ,ಬೆಲೆಯನ್ನು ಒದಗಿಸಬೇಕು. ವೈಜ್ಞಾನಿಕವಾಗಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳುವ ತರಬೇತಿ ನೀಡಬೇಕು. ಹೀಗಾದಲ್ಲಿ ನಾವು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಉಪಸಂಹಾರ : ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟçದಲ್ಲಿ ಇಂದಿನ ರೈತರ ಜೀವನ ಅಯೋಮಯವಾಗಿಬಿಟ್ಟಿದೆ. ನಾನಾ ಕೃಷಿ ಸಂಬಂಧಿತ ಕಾರಣಗಳಿಂದ ತನ್ನ ಜೀವವನ್ನೆ ತ್ಯಾಗ ಮಾಡುತ್ತಿದ್ದಾನೆ. ಆದ್ದರಿಂದ ಕೃಷಿಕರ ಜೀವನ ಸುಧಾರಿಸಬೇಕಾಗಿದೆ. |
Authorಬಸವರಾಜ ಟಿ.ಎಂ ಬಳ್ಳಾರಿ ArchivesCategories |